ADVERTISEMENT

ಮೊದಲ ಪಂದ್ಯದಲ್ಲಿ ಪಂತ್, 2ನೇ ಪಂದ್ಯದಲ್ಲಿ ಧವನ್‌ಗೆ ಪೆಟ್ಟು ನೀಡಿದ ಪ್ಯಾಟ್

ಪಿಟಿಐ
Published 18 ಜನವರಿ 2020, 11:20 IST
Last Updated 18 ಜನವರಿ 2020, 11:20 IST
ರಾಜ್‌ಕೋಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಪಕ್ಕೆಲುಬಿಗೆ ಚೆಂಡು ಬಡಿದು ನೋವನುಭವಿಸಿದ ಶಿಖರ್ ಧವನ್ ಅವರು ಮಲಗಿ ವಿಶ್ರಾಂತಿ ಪಡೆದರು. ರೋಹಿತ್ ಶರ್ಮಾ ಈ ಸಂದರ್ಭದಲ್ಲಿ ಇದ್ದರು  –ಪಿಟಿಐ ಚಿತ್ರ
ರಾಜ್‌ಕೋಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಪಕ್ಕೆಲುಬಿಗೆ ಚೆಂಡು ಬಡಿದು ನೋವನುಭವಿಸಿದ ಶಿಖರ್ ಧವನ್ ಅವರು ಮಲಗಿ ವಿಶ್ರಾಂತಿ ಪಡೆದರು. ರೋಹಿತ್ ಶರ್ಮಾ ಈ ಸಂದರ್ಭದಲ್ಲಿ ಇದ್ದರು  –ಪಿಟಿಐ ಚಿತ್ರ   

ರಾಜ್‌ಕೋಟ್ : ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಿಗೆ ಶುಕ್ರವಾರ ಬ್ಯಾಟಿಂಗ್‌ ಮಾಡುವಾಗ ಪಕ್ಕೆಲುಬಿಗೆ ಚೆಂಡು ಬಿದ್ದು ಪೆಟ್ಟಾಗಿದೆ.

ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡುವಾಗ ಪ್ಯಾಟ್‌ ಕಮಿನ್ಸ್‌ ಹಾಕಿದ ಹತ್ತನೇ ಓವರ್‌ನಲ್ಲಿ ಬೌನ್ಸರ್‌ ಎಸೆತವೊಂದು ಬಡಿಯಿತು. ನೋವಿನಲ್ಲಿಯೂ ಆಟ ಮುಂದುವರಿಸಿದ ಅವರು 96 ರನ್‌ ಗಳಿಸಿ ಔಟಾದರು. ಅದರಿಂದಾಗಿ ಅವರು ಫೀಲ್ಡಿಂಗ್ ಮಾಡಲಿಲ್ಲ. ಬದಲಿಗೆ ಯಜುವೇಂದ್ರ ಚಾಹಲ್ ಆಡಿದರು.

ಮುಂಬೈನಲ್ಲಿ ನಡೆದಮೊದಲ ಪಂದ್ಯದಲ್ಲಿ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕಮಿನ್ಸ್‌ ಎಸೆತ ಬೌನ್ಸರ್‌ ಹೆಲ್ಮೆಟ್‌ಗೆ ಬಡಿದಿತ್ತು. ಹೀಗಾಗಿ ಅವರ ಬದಲು ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪಿಂಗ್ ಜವಬ್ದಾರಿ ನಿರ್ವಹಿಸಿದ್ದರು.

ADVERTISEMENT

ಸದ್ಯ ಚಿಕಿತ್ಸೆ ಪಡೆಯುತ್ತಿರುವ ಅವರು ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಮೂರನೇ ಪಂದ್ಯದಲ್ಲಿ ಆಡುವ ಬಗ್ಗೆ ಸದ್ಯ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.