ADVERTISEMENT

IPL 2022: ರಶೀದ್ ಸಿಕ್ಸರ್ ಸಿಡಿಸಿದಾಗ ತಾಳ್ಮೆ ಕಳೆದುಕೊಂಡ ಮುರಳೀಧರನ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2022, 11:32 IST
Last Updated 28 ಏಪ್ರಿಲ್ 2022, 11:32 IST
ಮುತ್ತಯ್ಯ ಮುರಳೀಧರನ್ (ಟ್ವಿಟರ್ ಚಿತ್ರ)
ಮುತ್ತಯ್ಯ ಮುರಳೀಧರನ್ (ಟ್ವಿಟರ್ ಚಿತ್ರ)   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಬ್ಯಾಟರ್ ರಶೀದ್ ಖಾನ್ ಅಂತಿಮ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿದಾಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ತಾಳ್ಮೆ ಕಳೆದುಕೊಂಡಿರುವ ಘಟನೆ ನಡೆದಿದೆ.

ಸದಾ ಹಸನ್ಮುಖಿಯಾಗಿ ಕಾಣಿಸಿಕೊಳ್ಳುತ್ತಿರುವ ಮುರಳೀಧರನ್ ಸಿಟ್ಟಾಗುವುದು ಅತ್ಯಂತ ವಿರಳವಾಗಿದೆ. ಆದರೆ ಎಸ್‌ಆರ್‌ಎಚ್ ವೇಗಿ ಮಾರ್ಕೊ ಜಾನ್ಸೆನ್ ಕೊನೆಯ ಓವರ್‌ನಲ್ಲಿ 22 ರನ್ ಬಿಟ್ಟುಕೊಟ್ಟಿರುವುದು ಮುರಳೀಧರನ್ ಆಕ್ರೋಶಕ್ಕೆ ಕಾರಣವಾಗಿದೆ.

ರಶೀದ್ ಸಿಕ್ಸರ್ ಬಾರಿಸಿದಾಗ ಡಗೌಟ್‌ನಲ್ಲಿದ್ದ ಮುರಳೀಧರನ್, ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಎಂಟು ವರ್ಷಗಳ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದ ಮಾರ್ಗದರ್ಶಕ ರಾಹುಲ್ ದ್ರಾವಿಡ್ ತಾಳ್ಮೆ ಕಳೆದುಕೊಂಡಿದ್ದರಲ್ಲದೆ ತಮ್ಮ ಕ್ಯಾಪ್ ನೆಲಕ್ಕೆ ಎಸೆದಿದ್ದರು. ಇದಕ್ಕೆ ಸಮಾನವಾಗಿ ಮುರಳೀಧರನ್ ಗರಂ ಆಗಿರುವುದು ಐಪಿಎಲ್‌ನ ರೋಚಕತೆಗೆ ಸಾಕ್ಷಿಯಾಗಿದೆ.

ರಶೀದ್ ಖಾನ್ ತಮ್ಮ ಮಾಜಿ ತಂಡಎಸ್‌ಆರ್‌ಎಚ್ ವಿರುದ್ಧವೇ ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.