ADVERTISEMENT

Champions Trophy: ಫೈನಲ್‌ನಲ್ಲಿ ಪಾಕ್ ಅಧಿಕಾರಿಗಳ ಗೈರು; ಶೋಯಬ್‌ ಅಖ್ತರ್ ಬೇಸರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2025, 9:49 IST
Last Updated 10 ಮಾರ್ಚ್ 2025, 9:49 IST
ಶೋಯಬ್‌ ಅಖ್ತರ್‌ 
ಶೋಯಬ್‌ ಅಖ್ತರ್‌    

ಕರಾಚಿ: ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಧಿಕಾರಿ ಅನುಪಸ್ಥಿತಿಯನ್ನು ಪಾಕ್‌ ಮಾಜಿ ಕ್ರಿಕೆಟಿಗ ಶೋಯಬ್‌ ಅಖ್ತರ್‌ ಪ್ರಶ್ನಿಸಿದ್ದಾರೆ.

'ಭಾರತ ತಂಡ ಪ್ರಶಸ್ತಿ ಗೆದ್ದಿದೆ. ಆದರೆ, ಚಾಂಪಿಯನ್ಸ್‌ ಟ್ರೋಫಿ ಆಯೋಜಿಸಿದ್ದ ಪಿಸಿಬಿಯ ಪ್ರತಿನಿಧಿ ವೇದಿಕೆಯಲ್ಲಿ ಇರಲಿಲ್ಲವೇಕೆ ಎಂಬುದು ನನಗೆ ಅರ್ಥವಾಗಲಿಲ್ಲ' ಎಂದು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್‌'ನಲ್ಲಿ ಹೇಳಿದ್ದಾರೆ.

'ಪ್ರಶಸ್ತಿ ಪ್ರದಾನ ಮಾಡುವ ವೇಳೆ (ಪಿಸಿಬಿಯ) ಯಾರೂ ಇರಲಿಲ್ಲವೇಕೆ? ಇದು ನನ್ನನ್ನು ಮೀರಿದ್ದಾದರೂ, ಆಲೋಚಿಸಬೇಕಾದ ವಿಚಾರ. ಇದು ಜಾಗತಿಕ ವೇದಿಕೆ. ಅಲ್ಲಿ ನೀವು (ಪಿಸಿಬಿ ಅಧಿಕಾರಿ) ಇರಬೇಕಿತ್ತು. ಅನುಪಸ್ಥಿತಿಯನ್ನು ನೋಡಿ ಬೇಸರವಾಯಿತು' ಎಂದಿದ್ದಾರೆ.

ADVERTISEMENT

ಬಿಸಿಸಿಐ ಅಧ್ಯಕ್ಷ ಬಿನ್ನಿ ಭಾರತಕ್ಕೆ ಬಿಳಿ ಜಾಕೆಟ್‌ಗಳನ್ನು ಮತ್ತು ಪಂದ್ಯದ ಅಧಿಕಾರಿಗಳಿಗೆ ಪದಕಗಳನ್ನು ಪ್ರದಾನ ಮಾಡಿದರು, ಆದರೆ ಐಸಿಸಿ ಅಧ್ಯಕ್ಷ ಶಾ ಟ್ರೋಫಿಯನ್ನು ರೋಹಿತ್ ಶರ್ಮಾ ಅವರಿಗೆ ಹಸ್ತಾಂತರಿಸಿ ಭಾರತೀಯ ಆಟಗಾರರಿಗೆ ಪದಕಗಳನ್ನು ವಿತರಿಸಿದರು.

ಪಾಕಿಸ್ತಾನದ ಆತಿಥ್ಯದಲ್ಲಿ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಆಯೋಜನೆಗೊಂಡಿತ್ತು. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತವು ಪಾಕಿಸ್ತಾನದಲ್ಲಿ ತಮ್ಮ ಪಂದ್ಯಗಳನ್ನು ಆಡಲು ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.