ನವದೆಹಲಿ: ವಿಶ್ವ ಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಆಡುವ ಬಗ್ಗೆದೇಶ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಆ ನಿರ್ಧಾರಕ್ಕೆ ನಾವು ಬದ್ಧ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ದೇಶ ಏನು ಹೇಳುತ್ತದೆಯೋಮತ್ತು ಬಿಸಿಸಿಐ ಏನು ನಿರ್ಧರಿಸುತ್ತದೆಯೋಅದನ್ನು ನಾವುಪಾಲಿಸುತ್ತೇವೆ. ಇದು ನಮ್ಮ ನಿಲುವು ಎಂದು ಭಾನುವಾರ ಪ್ರತಿಕ್ರಿಯಿಸಿದ್ದಾರೆ.
ವಿಶ್ವಕಪ್ ಪಂದ್ಯದಲ್ಲಿ ಜೂನ್ 16ರಂದು ಭಾರತ- ಪಾಕ್ ನಡುವಿನ ಪಂದ್ಯ ನಡೆಯಲಿದೆ.
ಪುಲ್ವಾಮ ದಾಳಿ ನಂತರ ಭಾರತ ಪಾಕ್ ಜತೆ ಕ್ರಿಕೆಟ್ ಆಡಬಾರದೆಂಬ ಒತ್ತಾಯ ದೇಶದ ಜನರಿಂದ ಕೇಳಿಬಂದಿತ್ತು.
ವಿಶ್ವಕಪ್ನಲ್ಲಿ ಭಾರತ ಪಾಕ್ ಜತೆ ಆಡಬೇಕು, ಆಡದೇ ಇದ್ದರೆ ಪಾಕ್ಗೆ ಲಾಭ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದರು, ಗವಾಸ್ಕರ್ ಹೇಳಿಕೆ ಬೆಂಬಲಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಪಾಕಿಸ್ತಾನವನ್ನು ಆಟದಲ್ಲಿ ಪರಾಭವಗೊಳಿಸಬೇಕು.ಸುಮ್ಮನೆ 2 ಪಾಯಿಂಟ್ ಅವರಿಗೆ ಬಿಟ್ಟು ಕೊಡುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.