ಬಾಂಬೊಲಿಮ್ : ಕೋವಿಡ್–19 ಪಿಡುಗಿನ ನಡುವೆಯೂ ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಪುನರಾರಂಭವಾಗಿದ್ದನ್ನು ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ನ (ಎಫ್ಎಸ್ಡಿಎಲ್) ಮುಖ್ಯಸ್ಥೆ ನೀತಾ ಅಂಬಾನಿ ಸ್ವಾಗತಿಸಿದ್ದಾರೆ. ಫುಟ್ಬಾಲ್ ಟೂರ್ನಿಗಳ ಪುನರಾರಂಭದಲ್ಲಿ ಬಹಳಷ್ಟು ಸ್ಥೈರ್ಯದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯು ಶುಕ್ರವಾರ ಕೇರಳ ಬ್ಲಾಸ್ಟರ್ಸ್ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳ ನಡುವಿನ ಪಂದ್ಯದೊಂದಿಗೆ ಆರಂಭವಾಯಿತು. ಭಾರತದ ನೆಲದಲ್ಲಿ ಕೋವಿಡ್ ಕಾಲದಲ್ಲಿ ಆರಂಭಗೊಂಡ ಮೊದಲ ಪ್ರಮುಖ ಟೂರ್ನಿ ಎನಿಸಿಕೊಂಡಿತು.
‘ಐಎಸ್ಎಲ್ ಟೂರ್ನಿಯು ಕೋವಿಡ್ನಿಂದ ನಲುಗಿದ ಮನಸ್ಸುಗಳಿಗೆಮುಂದಿನ ನಾಲ್ಕು ತಿಂಗಳು ಸಂತಸವನ್ನು ಹಂಚಲಿದೆ‘ ಎಂದು ನೀತಾ ಹೇಳಿದ್ದಾರೆ.
’2020–21ರ ಆವೃತ್ತಿಯು ಎರಡು ಐತಿಹಾಸಿಕ ಕ್ಲಬ್ಗಳು (ಮೋಹನ್ ಬಾಗನ್ ಹಾಗೂ ಈಸ್ಟ್ ಬೆಂಗಾಲ್) ಸೇರ್ಪಡೆಯಾಗುವುದರೊಂದಿಗೆ ಅತ್ಯಂತ ರೋಮಾಂಚನಕಾರಿಯಾಗಿ ಋತುವಾಗಿ ಪರಿಣಮಿಸಿದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.