ADVERTISEMENT

ಚೇತರಿಕೆ ಹಾದಿಗೆ ಷೇರುಪೇಟೆ

ಆರ್ಥಿಕ ಉತ್ತೇಜನ ಕೊಡುಗೆ, ಆರ್‌ಬಿಐನ ಹೆಚ್ಚುವರಿ ನಿಧಿ ವರ್ಗಾವಣೆ ನಿರ್ಧಾರ

ಪಿಟಿಐ
Published 31 ಆಗಸ್ಟ್ 2019, 20:00 IST
Last Updated 31 ಆಗಸ್ಟ್ 2019, 20:00 IST
   

ಮುಂಬೈ: ಎರಡು ವಾರಗಳ ಬಳಿಕ ಷೇರುಪೇಟೆಗಳ ವಾರದ ವಹಿವಾಟು ಚೇತರಿಕೆ ಹಾದಿಗೆ ಮರಳಿದೆ.

ಎಂಟು ವಾರಗಳ ವಹಿವಾಟಿನಲ್ಲಿ ಕೇವಲ ಎರಡು ವಾರಗಳಲ್ಲಿ ಮಾತ್ರವೇ ಏರುಮುಖವಾಗಿ ವಹಿವಾಟು ಅಂತ್ಯವಾಗಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 632 ಅಂಶ ಹೆಚ್ಚಾಗಿ 37,332 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ADVERTISEMENT

ಐದು ದಿನಗಳಲ್ಲಿ ಮೂರು ದಿನಗಳ ವಹಿವಾಟು ಅವಧಿಯಲ್ಲಿ ಸೂಚ್ಯಂಕಗಳು ಏರಿಕೆ ಕಂಡುಕಂಡಿವೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 194 ಅಂಶ ಏರಿಕೆ ಕಂಡು 11,023 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಷೇರುಪೇಟೆಯಲ್ಲಿ ಮಾರಾಟಕ್ಕೆ ಗಮನ ನೀಡಿದ್ದಾರೆ. ವಾರದಲ್ಲಿ ₹ 1,945 ಕೋಟಿಗೂ ಹೆಚ್ಚಿನ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಸಕಾರಾತ್ಮಕ ಅಂಶಗಳು: ವಿದೇಶಿ ಸಾಂಸ್ಥಿಕ ಎಫ್‌ಪಿಐಗೆ ಹೆಚ್ಚುವರಿ ಸರ್ಚಾರ್ಜ್‌ ಕೈಬಿಡಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ಹೂಡಿಕೆ ಹೆಚ್ಚಾಗುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ ತನ್ನ ಬಳಿ ಇರುವ ಹೆಚ್ಚುವರಿ ನಿಧಿಯಲ್ಲಿ ₹ 1.76 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ನಿರ್ಧರಿಸಿದೆ. ಇದರಿಂದ ಸರ್ಕಾರಕ್ಕೆ ತನ್ನ ಸಾಲದ ಹೊರೆ ತಗ್ಗಿಸಿಕೊಳ್ಳಲು, ವಿತ್ತೀಯ ಕೊರತೆ ನಿಯಂತ್ರಿಸಲು ಅನುಕೂಲ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.