ADVERTISEMENT

ಮಹಾರಾಷ್ಟ್ರದಲ್ಲಿ ಆ್ಯಪಲ್ ಪ್ಲಾಂಟ್ ಸ್ಥಾಪನೆಗೆ ಮುಂದಾದ ವೇದಾಂತ

ಮಹಾರಾಷ್ಟ್ರದಲ್ಲಿ ಆ್ಯಪಲ್ ಐಫೋನ್ ಉತ್ಪಾದನಾ ಘಟಕ ಸ್ಥಾಪನೆಗೆ ವೇದಾಂತ ಮುಂದಾಗಿದೆ.

ರಾಯಿಟರ್ಸ್
Published 14 ಸೆಪ್ಟೆಂಬರ್ 2022, 14:08 IST
Last Updated 14 ಸೆಪ್ಟೆಂಬರ್ 2022, 14:08 IST
ವೇದಾಂತ ಚೇರ್ಮನ್ ಅನಿಲ್ ಅಗರ್‌ವಾಲ್
ವೇದಾಂತ ಚೇರ್ಮನ್ ಅನಿಲ್ ಅಗರ್‌ವಾಲ್   

ನವದೆಹಲಿ: ದೇಶದಲ್ಲಿ ಆ್ಯಪಲ್ ಐಫೋನ್ ಉತ್ಪಾದನಾ ಘಟಕ ಸ್ಥಾಪನೆಗೆ ವೇದಾಂತ ಲಿಮಿಟೆಡ್ ಮುಂದಾಗಿದೆ.

ಆ್ಯಪಲ್ ಕಂಪನಿಯ ಐಫೋನ್ ಮತ್ತು ಟಿವಿ, ಇತರ ಉಪಕರಣಗಳನ್ನು ಉತ್ಪಾದಿಸುವ ಘಟಕ ಸ್ಥಾಪಿಸಲು ವೇದಾಂತ ಲಿ. ನಿರ್ಧರಿಸಿದೆ. ಮಹಾರಾಷ್ಟ್ರದಲ್ಲಿ ನೂತನ ಘಟಕ ನಿರ್ಮಿಸುವ ಗುರಿಯಿದೆ ಎಂದು ಸಿಎನ್‌ಬಿಸಿ ಟಿವಿ18ಗೆ ವೇದಾಂತ ಚೇರ್ಮನ್ ಅನಿಲ್ ಅಗರ್‌ವಾಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಆದರೆ ಈ ಕುರಿತು ಆ್ಯಪಲ್ ಸಂಸ್ಥೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.

ADVERTISEMENT

ನೂತನ ಘಟಕ ಸ್ಥಾಪನೆ ಕುರಿತು ವೇದಾಂತ ಸಮೂಹವನ್ನು ರಾಯಿಟರ್ಸ್ ಸುದ್ದಿಸಂಸ್ಥೆ ಸಂಪರ್ಕಿಸಿದ್ದು, ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.