ಸಿಲಿಕಾನ್ ಸಿಟಿ ಹೆಗ್ಗಳಿಕೆಯ ಬೆಂಗಳೂರು ಸೆಪ್ಟೆಂಬರ್ ಮೊದಲೆರಡು ವಾರ ಮಳೆಯಿಂದ ನಲುಗಿಹೋಗಿತ್ತು. ಐಟಿ ಕಾರಿಡಾರ್ಗಳ ತಾಣವಾಗಿರುವ ಹೊರವಲಯವೇ ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಯಿತು. ಇದಕ್ಕೆಲ್ಲ ಕಾರಣ ರಾಜಕಾಲುವೆಗಳ ಒತ್ತುವರಿ. ಮಳೆನೀರು ಹರಿಯುವ ಸ್ಥಳವೆಲ್ಲ ಕಾಂಕ್ರೀಟ್ಮಯವಾಗಿದೆ. ದೊಡ್ಡದೊಡ್ಡ ಐಟಿ ಕಂಪನಿಗಳೂ ಈ ಒತ್ತುವರಿಯಲ್ಲಿ ಭಾಗಿಯಾಗಿರುವುದನ್ನು ಬಿಬಿಎಂಪಿ ದಾಖಲೆಗಳೇ ಸ್ಪಷ್ಟಪಡಿಸುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.