ADVERTISEMENT

ಸಿಂಹಗಳು ಸಂದರ್ಶನ ಕೊಡುವುದಿಲ್ಲ: ‘ಪಠಾಣ್‌’ನ ಪ್ರಚಾರ ತಂತ್ರದ ಬಗ್ಗೆ ಶಾರೂಕ್ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2023, 6:01 IST
Last Updated 30 ಜನವರಿ 2023, 6:01 IST
ಶಾರೂಕ್‌ ಖಾನ್‌
ಶಾರೂಕ್‌ ಖಾನ್‌   

ಮುಂಬೈ: ಯಾವುದೇ ಪ್ರಚಾರಗಳನ್ನು ಮಾಡದಿದ್ದರೂ 'ಪಠಾಣ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್ ಉತ್ತರಿಸಿದ್ದಾರೆ.

‘ಪಠಾಣ್‌’ ಚಿತ್ರಕ್ಕೆ ಅನುಸರಿಸಲಾದ ಪ್ರಚಾರದ ತಂತ್ರದ ಬಗ್ಗೆ ಮಾತನಾಡುತ್ತಾ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಖಾನ್‌, ‘ಸಿಂಹಗಳು ಸಂದರ್ಶನಗಳನ್ನು ನೀಡುವುದಿಲ್ಲ, ಹಾಗಾಗಿ (ನಾನೂ) ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ಚಿತ್ರಮಂದಿರಗಳೇ ಅರಣ್ಯ ಎಂದು ಕರೆದಿರುವ ಎಸ್‌ಆರ್‌ಕೆ, ನನ್ನನ್ನು ನೋಡಲು ಥಿಯೇಟರ್‌ಗಳಿಗೆ ಬನ್ನಿ ಎಂದು ಅಭಿಮಾನಿಗೆ ಹೇಳಿದ್ದಾರೆ.

ADVERTISEMENT

ಪ್ರಮೋಷನ್‌, ಸಂವಾದಗಳನ್ನು ಒಳಗೊಂಡ ಪ್ರಚಾರ ತಂತ್ರಗಳಿಂದ ದೂರವೇ ಉಳಿದಿದ್ದ ‘ಪಠಾಣ್‌’ ಚಿತ್ರ ಬಿಡುಗಡೆಗೂ ಮೊದಲು ವಿವಾದಕ್ಕೆ ಕಾರಣವಾಗಿತ್ತು.

ಚಿತ್ರದ ‘ಬೇಷರಮ್‌ ರಂಗ್‌’ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಬಟ್ಟೆ ಧರಿಸಿ ನರ್ತಿಸಿದ್ದರು. ಕೇಸರಿ ಬಣ್ಣವನ್ನು ಅವಮಾನಿಸುವ ಸಾಲುಗಳು ಗೀತೆಯಲ್ಲಿದೆ ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. ಈ ಮೂಲಕ ಚಿತ್ರತಂಡ ಕೆಲವರ ಭಾವನೆ ಘಾಸಿಗೊಳಿಸಿದೆ ಎಂದು ಕೆಲ ಬಲಪಂಥೀಯ ಸಂಘಟನೆಗಳು ಚಿತ್ರ ಬಾಯ್ಕಾಟ್‌ ಕರೆ ನೀಡಿದ್ದವು. ದೇಶದ ಕೆಲವೆಡೆ ಪ್ರತಿಭಟನೆ, ಚಿತ್ರಮಂದಿರಕ್ಕೆ ದಾಳಿಯ ನಡುವೆಯೂ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಪಠಾಣ್‌ ಯಶಸ್ವಿಯಾಗಿದೆ. 4 ದಿನದಲ್ಲಿ ಚಿತ್ರ ವಿಶ್ವದಾದ್ಯಂತ ₹429 ಕೋಟಿ ಗಳಿಸಿದೆ.

ಇವುಗಳನ್ನೂ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.