
ನಟಿ ಮಾಲಾಶ್ರೀ ಅವರು ಕುಟುಂಬ ಸಮೇತ ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಚಿನ್ನದ ಕಿರೀಟ ಅರ್ಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿನಟಿ ಮಾಲಾಶ್ರೀ ಪೋಸ್ಟ್ ಹಂಚಿಕೊಂಡು, ‘ಬಾಬಾನ ಶಕ್ತಿ ಬಗ್ಗೆ ಅನೇಕರಿಗೆ ಗೊತ್ತೇ ಇದೆ. ನಮ್ಮ ಕುಟುಂಬದಲ್ಲಿ ಯಾವುದೇ ಶುಭಕಾರ್ಯ ಕೈಗೊಳ್ಳುವ ಮುನ್ನ ಇಲ್ಲಿಗೆ ಭೇಟಿ ನೀಡುತ್ತೇವೆ. ನಾವು ನೀಡಿದ ಚಿಕ್ಕ ಕಾಣಿಕೆಯನ್ನು ಬಾಬಾ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ನನ್ನ ಪುತ್ರಿ ಆರಾಧನಾ ಸಿನಿಮಾರಂಗಕ್ಕೆ ಕಾಲಿಡುವ ಮುನ್ನ ಇಲ್ಲಿಗೆ ಭೇಟಿ ನೀಡಿ ಬಾಬಾನ ಆಶೀರ್ವಾದ ಪಡೆದುಕೊಂಡಿದ್ದೆವು. ಅನೇಕ ಸಂಗತಿಗಳಲ್ಲಿ ಬಾಬ ನಮಗೆ ದಾರಿ ತೋರಿಸಿದ್ದಾರೆ. ಹಾಗಾಗಿ ಈ ಚಿಕ್ಕ ಕಾಣಿಕೆ ನೀಡುತ್ತೇವೆ’ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ನಟಿ ಮಾಲಾಶ್ರೀ ಜತೆಯಲ್ಲಿ ಪುತ್ರಿ ಆರಾಧನಾ, ಪುತ್ರ ಆರ್ಯನ್ ಹಾಗೂ ಅವರ ಜತೆ ಕುಟುಂಬದ ಆಪ್ತರು ಶಿರಡಿ ಸಾಯಿಬಾಬಾನ ಆಶೀರ್ವಾದ ಪಡೆದುಕೊಂಡರು.
ನಟಿ ಮಾಲಾಶ್ರೀ ಅವರು ‘ಗಜಪತಿ ಗರ್ವಭಂಗ’, ‘ಪೋಲಿಸ್ನ ಹೆಂಡ್ತಿ’, ‘ಕಿತ್ತೂರಿನ ಹುಲಿ’, ‘ರಾಣಿ ಮಹಾರಾಣಿ’ 'ನಂಜುಂಡಿ ಕಲ್ಯಾಣ', ‘ರಾಮಾಚಾರಿ’ ಸೇರಿದಂತೆ ಅನೇಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.
ಮಾಲಾಶ್ರೀ ಪುತ್ರಿ ಆರಾಧನಾ ಅವರು ನಟ ದರ್ಶನ್ ಜತೆ ‘ಕಾಟೇರ‘ ಚಿತ್ರದಲ್ಲಿ ನಟಿಸಿ ತಮ್ಮ ಸಿನಿಮಾ ಪ್ರಯಾಣವನ್ನು ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.