ಹೊಲ– ಗದ್ದೆ, ಕಟ್ಟಡ, ಧೂಳಿನಲ್ಲಿ ಕೆಲಸ ಮಾಡುವವರ ಬೆರಳುಗಳು ಸ್ವಚ್ಛವಾಗಿಲ್ಲದಿದ್ದರೆ ಹಾಗೂ ಬೆರಳಿಗೆ ಏನಾದರೂ ಗಾಯ ಮಾಡಿಕೊಂಡರೆ ಅದು ಸೋಂಕಿಗೆ ತಿರುಗಿ ಉಗುರು ಸುತ್ತಿಗೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕ್ರಮಗಳ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.
ಉಗುರು ಸುತ್ತಿಗೆ ಕಾರಣಗಳು
ನಿಯಮಿತ್ತವಾಗಿ ಉಗುರು ಕತ್ತರಿಸದೆ ಇರುವುದು
ಬೆರಳುಗಳಿಗೆ ಗಾಯ ಮತ್ತು ಸೋಂಕು ತಗುಲುವುದು
ಉಗುರು ಕಚ್ಚುವುದು
ಕಲುಷಿತ ನೀರು ಅಥವಾ ಮಣ್ಣಿನಲ್ಲಿ ನಿರಂತರ ಕೆಲಸ ಮಾಡುವುದು ಉಗುರು ಸುತ್ತಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
ಪರಿಹಾರಗಳು
ನಿಯಮಿತ್ತವಾಗಿ ಉಗುರು ಕತ್ತರಿಸುವುದು
ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು
ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಉಗುರು ಸುತ್ತು ಆಗಿರುವ ಬೆರಳನ್ನು 5ರಿಂದ10 ನಿಮಿಷ ಇಡಬೇಕು. ಒಂದೆರಡು ದಿನ ಹೀಗೆ ಮಾಡುವುದರಿಂದ ಈ ಸಮಸ್ಯೆ ನಿವಾರಣೆ ಆಗುತ್ತದೆ.
ಅರಿಶಿನ ಪುಡಿಯನ್ನು ಜತೆ ಕೊಬ್ಬರಿ ಎಣ್ಣೆಯ ಜತೆ ಸೇರಿಸಿ ಬೆಚ್ಚಗೆ ಮಾಡಿ ,ಹಚ್ಚುವುದರಿಂದ ಉಗುರು ಸುತ್ತು ನಿವಾರಣೆ ಆಗುತ್ತದೆ.
ಉಗುರು ಸುತ್ತು ಸಂದರ್ಭದಲ್ಲಿ ಎಣ್ಣೆ ಅಂಶ ಇರುವ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು.
ಸ್ನಾನ , ಕೈಕಾಲು ತೊಳೆದ ಬಳಿಕ ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.
ರಸ ತೆಗೆದ ಲಿಂಬುವಿನಿಂದ ವಾರಕೊಮ್ಮೆಉಗುರನ್ನು ಸ್ವಚ್ಛಗೊಳಿಸುವುದರಿಂದ ಸೊಂಕುಗಳನ್ನು ತಡೆಯುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.