ADVERTISEMENT

ಏರ್‌ ಇಂಡಿಯಾ ವಿಮಾನ ದುರಂತ: ನ್ಯಾಯಾಂಗ ತನಿಖೆಗೆ ಮೃತ ಪೈಲಟ್‌ ತಂದೆ ಆಗ್ರಹ

ಪಿಟಿಐ
Published 16 ಅಕ್ಟೋಬರ್ 2025, 15:20 IST
Last Updated 16 ಅಕ್ಟೋಬರ್ 2025, 15:20 IST
ಅಹಮದಾಬಾದ್‌ ವಿಮಾನ ಪತನ–ಪಿಟಿಐ ಚಿತ್ರ
ಅಹಮದಾಬಾದ್‌ ವಿಮಾನ ಪತನ–ಪಿಟಿಐ ಚಿತ್ರ   

ನವದೆಹಲಿ: ಅಹಮದಾಬಾದ್‌ನಲ್ಲಿ ಜೂನ್ 12ರಂದು ಸಂಭವಿಸಿದ್ದ ಏರ್‌ ಇಂಡಿಯಾ ವಿಮಾನ ಅಪಘಾತದ ಕುರಿತು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೋರಿ ಅಪಘಾತದಲ್ಲಿ ಮೃತಪಟ್ಟ ಪೈಲಟ್‌ ಕ್ಯಾಪ್ಟನ್‌ ಸುಮಿತ್‌ ಸಭರ್‌ವಾಲ್‌ ಅವರ ತಂದೆ ಪುಷಕ್‌ರಾಜ್‌ ಹಾಗೂ ಭಾರತೀಯ ಪೈಲಟ್‌ಗಳ ಒಕ್ಕೂಟವು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. 

‘ವಿಮಾನ ಅಪಘಾತ ತನಿಖಾ ಬ್ಯೂರೊ’ದ (ಎಎಐಬಿ) ಪ್ರಾಥಮಿಕ ವರದಿಯ ಕೆಲವು ಅಂಶಗಳು ‘ಪೈಲಟ್‌ಗಳ ಬೇಜವಾಬ್ದಾರಿ’ಯ ಬಗ್ಗೆ ಹೇಳಿವೆ ಎಂದು ಸುಪ್ರೀಂ ಕೋರ್ಟ್‌ ಸೆ.22ರಂದು ಹೇಳಿತ್ತು. ದುರಂತದ ಕುರಿತು ನ್ಯಾಯಸಮ್ಮತ, ಪಾರದರ್ಶಕ ಹಾಗೂ ಬಲಿಷ್ಠ ತಂತ್ರಜ್ಞರ ತಂಡದಿಂದ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು 91 ವರ್ಷದ ಪುಷಕ್‌ರಾಜ್‌ ಸಭರ್‌ವಾಲ್ ಮನವಿ ಮಾಡಿದ್ದಾರೆ.

ಸ್ವತಂತ್ರ ಹಾಗೂ ನ್ಯಾಯಯುತ ತನಿಖೆ ಕೋರಿ ಸಲ್ಲಿಸಲಾದ ಮತ್ತೊಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ (ಡಿಜಿಸಿಎ) ನೋಟಿಸ್‌ ಜಾರಿ ಮಾಡಿದೆ.

ADVERTISEMENT
ಪುಷಕ್‌ರಾಜ್‌ ಸಭರ್‌ವಾಲ್‌–ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.