ADVERTISEMENT

ಅಂಬೇಡ್ಕರ್‌ಗೆ ಒತ್ತಾಯದಿಂದಲೇ ಭಾರತ ರತ್ನ ನೀಡಲಾಗಿದೆ: ಓವೈಸಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 5:39 IST
Last Updated 28 ಜನವರಿ 2019, 5:39 IST
ಓವೈಸಿ
ಓವೈಸಿ   

ಕಲ್ಯಾಣ (ಮಹಾರಾಷ್ಟ್ರ): ‘ಅಂಬೇಡ್ಕರ್‌ ಅವರಿಗೂ ಭಾರತ ರತ್ನವನ್ನು ಒತ್ತಾಯದಿಂದ ನೀಡಲಾಗಿದೆಯೇ ಹೊರತು ಒಮ್ಮತದ ಮನಸ್ಸಿನಿಂದ ಅಲ್ಲ’ ಎಂದುಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು.

‘ಇಲ್ಲಿಯವರೆಗೆ ಭಾರತ ರತ್ನ ನೀಡಿರುವವರಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು, ಮೇಲ್ಜಾತಿ ಮತ್ತು ಬ್ರಾಹ್ಮಣರು ಎಷ್ಟಿದ್ದಾರೆ? ಬಾಬಾ ಸಾಹೇಬ್ ಅಂಬೇಡ್ಕರ್‌ ಅವರಿಗೂ ಒಲ್ಲದ ಮನಸ್ಸಿನಿಂದಲೇ ಭಾರತ ರತ್ನ ನೀಡಲಾಗಿದೆ’ ಎಂದು ಟೀಕಿಸಿದರು.‌

ಇದನ್ನೂ ಓದಿ:ಭಾರತ ರತ್ನ ಆಯ್ಕೆಗೆ ಅಪಸ್ವರ

ADVERTISEMENT

ಆರ್‌ಎಸ್‌ಎಸ್‌ ಪ್ರಮುಖ ನಾನಾಜಿ ದೇಶಮುಖ್‌, ಬಿಜೆಪಿ ಅಭ್ಯರ್ಥಿಯಾಗಿದ್ದ ಗಾಯಕ ಭೂಪೆನ್‌ ಹಜಾರಿಕಾ ಮತ್ತು ಪ್ರಣವ್‌ ಮುಖರ್ಜಿ ಅವರಿಗೆ ಭಾರತ ರತ್ನ ಗೌರವ ದೊರೆತಿರುವ ಹಿನ್ನಲೆಯಲ್ಲಿ ಈ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.