ನವದೆಹಲಿ: ಮಂಗಳವಾರ ನಿಧನರಾದ ಹಿರಿಯ ಸಮಾಜವಾದಿ ಹಾಗೂ ರಕ್ಷಣಾ ಖಾತೆ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಚಿತಾಭಸ್ಮವನ್ನು ಇಲ್ಲಿನಪೃಥ್ವೀರಾಜ್ ರಸ್ತೆಯ ಕ್ರೈಸ್ತ ಸ್ಮಶಾನದಲ್ಲಿ ಶುಕ್ರವಾರ ಸಮಾಧಿ ಮಾಡಲಾಯಿತು.
ಜಾರ್ಜ್ ಫರ್ನಾಂಡಿಸ್ ಅವರ ಅಂತ್ಯಕ್ರಿಯೆ ಲೋಧಿ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಗುರುವಾರ ಮಧ್ಯಾಹ್ನ ನಡೆದಿತ್ತು.
ಜಾರ್ಜ್ ಅವರ ಚಿತಾಭಸ್ಮದ ಸ್ವಲ್ಪ ಭಾಗವನ್ನು ಮಾತ್ರ ಸಮಾಧಿ ಮಾಡಲಾಗಿದ್ದು, ಉಳಿದಿದ್ದನ್ನು ಬೆಂಗಳೂರಿನ ಕ್ರಿಶ್ಚಿಯನ್ ಸ್ಮಶಾನದಲ್ಲಿ ಸಮಾಧಿ ಮಾಡಲಾಗುವುದು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
‘ಜಾರ್ಜ್ ಅವರ ಚಿತಾಭಸ್ಮದ ಸಮಾಧಿಯನ್ನು ಅವರು ಜನಿಸಿದ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಮಾಡಬೇಕು ಎಂದು ಅವರ ಅಭಿಮಾನಿಗಳು, ಸಂಬಂಧಿಕರು ಕೋರಿದ್ದಾರೆ. ಜಾರ್ಜ್ ಅವರ ಇಚ್ಛೆಯೂ ಇದೇ ಆಗಿತ್ತು. ಆದ್ದರಿಂದ ಉಳಿದಿರುವ ಚಿತಾಭಸ್ಮವನ್ನು ಬೆಂಗಳೂರಿನಲ್ಲಿ ಸಮಾಧಿ ಮಾಡಲಾಗುವುದು’ ಎಂದು ಜಾರ್ಜ್ ಅವರ ಸಹೋದರ ಮೈಕೆಲ್ ಫರ್ನಾಂಡಿಸ್ ಹೇಳಿದ್ದಾರೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.