ADVERTISEMENT

ರಫೇಲ್‌ ಮೇಲೆ ಓಂ ಅಲ್ಲದೆ ಇನ್ನೇನು ಬರೀಬೇಕಿತ್ತು? ರಾಜನಾಥ್‌ ಸಿಂಗ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2019, 10:50 IST
Last Updated 17 ಅಕ್ಟೋಬರ್ 2019, 10:50 IST
ರಾಜನಾಥ್ ಸಿಂಗ್ (ಚಿತ್ರಕೃಪೆ: ಎಎನ್‌ಐ)
ರಾಜನಾಥ್ ಸಿಂಗ್ (ಚಿತ್ರಕೃಪೆ: ಎಎನ್‌ಐ)   

ನವದೆಹಲಿ: ವಿಜಯದಶಮಿಯಂದು ಶಸ್ತ್ರಪೂಜೆ ನೆರವೇರಿಸುವುದು ನಮ್ಮ ಸಂಪ್ರದಾಯ. ಅದರಲ್ಲಿ ತಪ್ಪೇನಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶ್ನಿಸಿದರು.

ಹರಿಯಾಣದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು,ರಫೇಲ್ ಯುದ್ಧ ವಿಮಾನಕ್ಕೆ ಶಸ್ತ್ರಪೂಜೆ ನೆರವೇರಿಸಿದ ಮೇಲೆ ಓಂ ಎಂದು ಬರೆದೆ. ಅದು ಬಿಟ್ಟು ಇನ್ನೇನು ಬರೆಯಬೇಕಿತ್ತು ಎಂದು ಖಾರವಾಗಿ ನುಡಿದರು.

‘ನಾನು ರಫೇಲ್ ಮೇಲೆ ಓಂ ಎಂದು ಬರೆದಾಗ, ಇವರೇಕೆ ಹೀಗೆ ಬರೆದರು ಎಂದು ಕೆಲವರು ಪ್ರಶ್ನಿಸಿದರು. ಈಗ ನಾನು ರಾಹುಲ್‌ಗಾಂಧಿ ಅವರನ್ನು ಕೇಳಲು ಇಚ್ಛಿಸುತ್ತೇನೆ. ಮಾನ್ಯರೇ, ಯುದ್ಧ ವಿಮಾನದ ಮೇಲೆ ಓಂ ಎಂದು ಬರೆಯದೆ ಇನ್ನೇನು ಬರೀಬೇಕಿತ್ತು’ ಎಂದು ರಾಜನಾಥ್ ವ್ಯಂಗ್ಯವಾಡಿದರು.

ರಫೇಲ್ ಯುದ್ಧ ವಿಮಾನ ಪಡೆದುಕೊಳ್ಳಲು ರಾಜನಾಥ್ ಸಿಂಗ್ ಪ್ಯಾರೀಸ್‌ಗೆ ಹೋಗಿದ್ದನ್ನು ರಾಹುಲ್ ಗಾಂಧಿ ಟೀಕಿಸಿದ್ದರು. ‘ಬಿಜೆಪಿ ನಾಯಕರಲ್ಲಿ ಪಾಪಪ್ರಜ್ಞೆ ಇದ್ದಂತಿದೆ. ಇಲ್ಲದಿದ್ದರೆ ಮೊದಲ ವಿಮಾನ ಸ್ವೀಕರಿಸಲು ರಾಜನಾಥ್‌ ಸಿಂಗ್‌ ಪ್ಯಾರೀಸ್‌ಗೆ ಏಕೆ ಹೋಗಬೇಕಿತ್ತು’ ಎಂದು ರಾಹುಲ್ ಪ್ರಶ್ನಿಸಿದ್ದರು.

ಲೋಕಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರಾಹುಲ್ ಗಾಂಧಿ ರಫೇಲ್‌ ಒಪ್ಪಂದದಲ್ಲಿ ಅಕ್ರಮಗಳು ನಡೆದಿವೆ ಎಂದುಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.