ADVERTISEMENT

ತಮಿಳುನಾಡು ರಾಜ್ಯ ವಿಭಜನೆ ಪ್ರಸ್ತಾವ ಇಲ್ಲ: ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 10:57 IST
Last Updated 3 ಆಗಸ್ಟ್ 2021, 10:57 IST
ನಿತ್ಯಾನಂದ ರೈ
ನಿತ್ಯಾನಂದ ರೈ   

ನವದೆಹಲಿ: ‘ತಮಿಳುನಾಡು ರಾಜ್ಯವನ್ನು ವಿಭಜಿಸುವ ಯಾವುದೇ ಪ್ರಸ್ತಾವಕೇಂದ್ರ ಸರ್ಕಾರದ ಮುಂದಿಲ್ಲ’ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.

ತಮಿಳುನಾಡು ಸಂಸದರಾದ ಟಿ.ಆರ್‌.ಪಾರಿವೆಂಧರ್ ಮತ್ತು ಎಸ್‌.ರಾಮಲಿಂಗಂ ಅವರ ಪ್ರಶ್ನೆಗೆ ಉತ್ತರಿಸಿದರು. ತಮಿಳುನಾಡು ವಿಭಜಿಸಿ ‘ಕೊಂಗುನಾಡು’ ಹೆಸರಿನಲ್ಲಿ ಹೊಸ ರಾಜ್ಯ ರಚಿಸಲಾಗುತ್ತದೆ ಎಂಬ ವದಂತಿಗಳಿದ್ದವು.

ಗೌಂಡರ್ ಸಮುದಾಯ ಪ್ರಾಬಲ್ಯ ಹೊಂದಿರುವ ನಮಕ್ಕಲ್‌, ಸೇಲಂ, ತಿರುಪ್ಪುರ್, ಕೊಯಮತ್ತೂರು ಒಳಗೊಂಡಂತೆ ಕೊಂಗುನಾಡು ರಾಜ್ಯ ಸ್ಥಾಪನೆಯಾಗಲಿದೆ ಎಂದೂ ಊಹಾಪೋಹಗಳಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.