ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ
–ಪಿಟಿಐ ಚಿತ್ರ
ನವದೆಹಲಿ: ಗಂಗಾ ನದಿ ಸ್ವಚ್ಛತೆಯ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ‘ಗಂಗಾ ಮಾತೆ’ಯನ್ನು ವಂಚಿಸಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಉತ್ತರಾಖಂಡ್ನ ಗಂಗಾ ಮಾತೆಯ ಚಳಿಗಾಲದ ಆವಾಸಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ ಮರುಕ್ಷಣವೇ ಮಲ್ಲಿಕಾರ್ಜುನ ಖರ್ಗೆ ಅವರು ‘ಎಕ್ಸ್’ನಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.
ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ದೇಗುಲ ಮಾರ್ಗದಲ್ಲಿರುವ ಮುಖ್ವಾ ದೇಗುಲದಲ್ಲಿ ಗುರುವಾರ ಬೆಳಗ್ಗೆ ಮೋದಿಯವರು ಪೂಜೆ ಸಲ್ಲಿಸಿದ್ದರು. ಗಂಗಾ ಮಾತೆಯ ಶ್ರದ್ಧಾ ಕೇಂದ್ರ ಗಂಗೋತ್ರಿ ದೇಗುಲದ ಮುಖ್ಯದ್ವಾರವನ್ನು ಚಳಿಗಾಲಕ್ಕೆ ಮುಚ್ಚಲಾಗುತ್ತದೆ. ಅದಕ್ಕೂ ಮುನ್ನ ಮುಖ್ವಾ ದೇಗುಲಕ್ಕೆ ಗಂಗಾ ಮಾತೆಯ ಮೂರ್ತಿಯನ್ನು ತಗೆದುಕೊಂಡು ಹೋಗಲಾಗುತ್ತದೆ.
ಮುಖ್ವಾ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಹರ್ಸಿಲ್ನಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ‘ನನ್ನನ್ನು ಗಂಗಾ ಮಾತೆ ದತ್ತು ಪಡೆದಿದ್ದಾಳೆ ಎನಿಸುತ್ತದೆ. ಆಕೆಯ ಆಶೀರ್ವಾದವೇ ನನ್ನನ್ನು ಕಾಶಿವರೆಗೂ ಕರೆತಂದಿತು. ಜನರ ಸೇವೆ ಮಾಡಲೂ ಅವಕಾಶ ಕಲ್ಪಿಸಿತು’ ಎಂದು ಹೇಳಿದ್ದರು.
ಮೋದಿ ಪ್ರಾರ್ಥನೆ ಬಗ್ಗೆ ‘ಎಕ್ಸ್‘ನಲ್ಲಿ ಟೀಕಿಸಿರುವ ಖರ್ಗೆ ‘ಗಂಗಾ ಮಾತೆಯೇ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಮೋದಿ ಹೇಳಿದ್ದಾರೆ. ಆದರೆ ವಾಸ್ತವ ಏನೆಂದರೆ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ತನ್ನ ಗ್ಯಾರಂಟಿಯನ್ನೇ ಮೋದಿ ಮರೆತಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.