ADVERTISEMENT

ನ್ಯಾಯಾಂಗ ತನಿಖೆ,ಸದನ ಸಮಿತಿ ರಚನೆಗೆ ಬಿಜೆಪಿ ಪಟ್ಟು; ಸಾಧ್ಯವಿಲ್ಲವೆಂದ ಸಭಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 13:06 IST
Last Updated 11 ಫೆಬ್ರುವರಿ 2019, 13:06 IST
   

ಬೆಂಗಳೂರು:ಆಡಿಯೊ ವಿಚಾರವಾಗಿ ವಿಧಾನಸಭೆ ಕಲಾದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿಂದ ಪರ–ವಿರೋಧ ಚರ್ಚೆನಡೆದು, ಗದ್ದಲ ಉಂಟಾಯಿತು. ಈ ನಡುವೆ ವಿಪಕ್ಷ ಬಿಜೆಪಿ ಸದಸ್ಯರುಎಸ್‌ಐಟಿ ರಚನೆ ಬೇಡ. ಸದನ ಸಮಿತಿ ರಚನೆ ಮಾಡಿ ಅಥವಾ ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರಾದ ಕೆ.ಆರ್‌.ರಮೇಶ್‌ ಕುಮಾರ್‌ ಅವರು, ‘ಸದನ ಸಮಿತಿ ರನಚೆ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮಧ್ಯಾಹ್ನ ಕಲಾಪ ಆರಂಭವಾದಾಗ ಸದನದಲ್ಲಿ ಗದ್ದಲ ಉಂಟಾಗಿದ್ದರಿಂದ ಕಲಾಪವನ್ನು ಅರ್ಧಗಂಟೆ ಮುಂದೂಡಲಾಗಿತ್ತು. ಬಳಿಕ, ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷದ ಸದಸ್ಯರು ತನಿಖೆಯನ್ನು ಎಸ್‌ಐಟಿಗೆ ವಹಿಸುವುದು ಬೇಡ. ಬದಲಿಗೆ ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿ ರಚನೆ ಮಾಡಬೇಕುಎಂದು ಆಗ್ರಹಿಸಿ, ರೂಲಿಂಗ್‌ ಮರು ಪರಿಶೀಲಿಸಿ ಎಂದು ಒತ್ತಾಯಿಸಿದರು.

‘ನಾನು ಅಂಪೈರ್’ ಸಭಾಧ್ಯಕ್ಷ
‘ನಾನು ಅಂಪೈರ್‌ ಅಷ್ಟೆ’ ಎಂದ ರಮೇಶ್‌ ಕುಮಾರ್‌, ಅವರು ಅದನ್ನು(ಆರೋಪ) ಸಾಭೀತುಪಡಿಸಲಿ, ನೀವು ಅದನ್ನು ಅಲ್ಲಗಳೆಯಿರಿ. ಯಾವ ವಿಷಯಕ್ಕೆ ನನ್ನ ಹೆಸರು ಪ್ರಸ್ತಾಪವಾಗಿದೆಯೋ ಅವರ ಮಾತಿನ ಪ್ರಕ್ರಿಯೆಯಿಂದ ನಾನು ಸಮಿತಿ ರಚನೆ ಮಾಡುವಂತೆ ಸಿಎಂಗೆ ಸೂಚಿಸಿದ್ದೇನೆ. ಅದಕ್ಕೆ ಅವರು ಸಮಿತಿ ರಚಿಸುವುದಾಗಿ ಹೇಳಿದ್ದಾರೆ ಎಂದರು.

ADVERTISEMENT

ಕಾಲ ಕಾಲಕ್ಕೆ ಈ ಕಡೆಯಿಂದ ಆಕಡೆ, ಆಕಡೆಯಿಂದ ಈ ಕಡೆ ಕೂರುವುದು(ಆಡಳಿತ ಮತ್ತು ವಿರೋಧ ಪಕ್ಷ) ನಡೆಯುತ್ತೆ. ವಿರೋಧ ಪಕ್ಷದವರು ಭಾವಿಸಿರುವಂತೆ ಎಸ್‌ಐಟಿಯಲ್ಲಿ ಹಸ್ತಕ್ಷೇಪ ಮಾಡಿ ಮುಖ್ಯಮಂತ್ರಿ ಆ ಮಟ್ಟಕ್ಕೆ ಹೋಗಿ ತಪ್ಪು ಮಾಡುತ್ತಾರೆ ಎಂದು ಹೇಳಲಾಗದು ಎಂದು ಸಭಾಧ್ಯಕ್ಷರು ಹೇಳಿದರು.

‘ಸದನ ಸಮಿತಿ ರನಚೆ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ ಸಭಾಧ್ಯಕ್ಷ ರಮೇಶ್‌ಕುಮಾರ್‌, ‘ಸಮಯದ ಕಾರಣ 15 ದಿನಗಳ ಒಳಗೆ ತನಿಖೆ ಆಗಬೇಕು ಎಂಬ ಉದ್ದೇಶದಿಂದ ಎಸ್‌ಐಟಿಗೆ ನೀಡುವಂತೆ ಸಿಎಂಗೆ ಹೇಳಿದ್ದೇನೆ. ನ್ಯಾಯಾಂಗ ತನಿಖೆಯಿಂದ ಬೇಗ ಬಗೆಹರಿಯುವುದಿಲ್ಲ. 15 ದಿನಗಳ ಒಳಗೆ ತನಿಖೆ ಮುಗಿದು ನನ್ನ ತಲೆ ಮೇಲಿರುವ ಭಾರವನ್ನು ಇಳಿಸಿಕೊಂಡು ನಿರಾಳವಾಗಬೇಕು ಎಂಬ ಉದ್ದೇಶದಿಂದ ಎಸ್‌ಐಟಿಗೆ ನೀಡಲು ಸೂಚಿಸಿದ್ದೇನೆ ಎಂದು ಸಭಾಧ್ಯಕ್ಷರು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

‘ಎಲ್ಲಿಂದ ಬರುತ್ತೆ ನಿಮಗೆ ಗಡ್ಸು’
ಈ ವೇಳೆ ಮಾತನಾಡಿ ಬೇರೆ ವಿಷಯಗಳನ್ನು ಪ್ರಸ್ತಾಪಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಮಾತಿಗೆ ಸಭಾಧ್ಯಕ್ಷರು ಪ್ರತಿಕ್ರಿಯಿಸಿ, ‘ಕುಳಿತುಕೊಳ್ಳಿ. ಎಲ್ಲಿಂದ ಬರುತ್ತೆ ನಿಮಗೆ ಗಡ್ಸು’ ಎಂದು ರೇಣುಕಾಚಾರ್ಯ ವಿರುದ್ಧ ಹರಿಹಾಯ್ದರು.

ಕಲಾಪ ನಾಳೆಗೆ

ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿದ್ದಂತೆ ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಆರೋಪ ಪ್ರತ್ಯಾರೋಪಕ್ಕೆ ತೊಡಗಿದರು. ಸದನದಲ್ಲಿ ಗದ್ದಲ ಉಂಟಾಗಯಿತು. ಇದರಿಂದ ಸಭಾಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡಿದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.