
ಆರ್ಸಿಬಿಯ ಮಯಂಕ್ ಅಗರವಾಲ್ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು –
ಆರ್ಸಿಬಿ ಎಕ್ಸ್ ಚಿತ್ರ
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹರಾಜು ಪ್ರಕ್ರಿಯೆ ಇಂದು (ಡಿಸೆಂಬರ್ 16)ರಂದು ಅಬುಧಾಬಿಯಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ 11 ಮಂದಿ ಕರ್ನಾಟಕದ ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ.
ಐಪಿಎಲ್ ಹರಾಜಿನಲ್ಲಿರುವ ಕನ್ನಡಿಗರು
ಮಯಾಂಕ್ ಅಗರವಾಲ್ ₹75 ಲಕ್ಷ
ಅಭಿನವ್ ಮನೋಹರ್ ₹ 30 ಲಕ್ಷ
ವಿದ್ಯಾಧರ ಪಾಟೀಲ್ ₹30 ಲಕ್ಷ
ವಿದ್ವತ್ ಕಾವೇರಪ್ಪ ₹30 ಲಕ್ಷ
ಕೆ.ಸಿ. ಕಾರಿಯಪ್ಪ ₹30 ಲಕ್ಷ
ಪ್ರವೀಣ್ ದುಬೆ ₹30 ಲಕ್ಷ
ಮನೋಜ್ ಭಾಂಡಗೆ ₹30 ಲಕ್ಷ
ಜಗದೀಶ ಸುಚಿತ್ ₹ 30 ಲಕ್ಷ
ಕೆ.ಎಲ್. ಶ್ರೀಜಿತ್ ₹30 ಲಕ್ಷ
ಅಭಿಲಾಷ್ ಶೆಟ್ಟಿ ₹ 30 ಲಕ್ಷ
ಶ್ರೀವತ್ಸ ಆಚಾರ್ಯ ₹30 ಲಕ್ಷ
ಕಳೆದ ಬಾರಿ ನಡೆದ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಕೂಡ ಮಯಾಂಕ್ ಅಗರವಾಲ್ ಅವರನ್ನು ಖರೀದಿಸಿರಲಿಲ್ಲ. ಆದರೆ, ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು.
ಈ ಬಾರಿ ಅವರನ್ನು ಆರ್ಸಿಬಿ ಫ್ರಾಂಚೈಸಿ ಕೈಬಿಟ್ಟಿದ್ದು, ಮಿನಿ ಹರಾಜಿನಲ್ಲಿ ₹75 ಲಕ್ಷ ಮೂಲ ಬೆಲೆ ಹೊಂದಿರುವ ಮಯಾಂಕ್ ಅವರನ್ನು ಸಿಎಸ್ಕೆ ಖರೀದಿಸುವ ಸಾಧ್ಯತೆ ಇದೆ.
ಇನ್ನು ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಆಗಿರುವ ಅಭಿನವ್ ಮನೋಹರ್ ಅವರು ಕಳದ ಎರಡು ಸೀಸನ್ಗಳಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ಆದರೆ, ಈ ಬಾರಿ ಅವರನ್ನು ಕೈಬಿಟ್ಟಿರುವುದರಿಂದ ಅನೇಕ ಫ್ರಾಂಚೈಸಿಗಳು ಅವರ ಖರೀದಿಗೆ ಮುಂದಾಗುವ ಸಾಧ್ಯತೆ ಇದೆ. ಇವರ ಜೊತೆಗೆ ಮನೋಜ್ ಭಾಂಡಗೆ, ಕೆ.ಎಲ್ ಶ್ರೀಜಿತ್, ವಿದ್ಯಾಧರ ಪಾಟೀಲ್ ಅವರ ಮೇಲೂ ಫ್ರಾಂಚೈಸಿಗಳು ಕಣ್ಣಿಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.