ADVERTISEMENT

ಕ್ವಾರಂಟೈನ್‌ ಇಲ್ಲದೇ ಕಣಕ್ಕಿಳಿದ ಕರನ್ ಸ್ಯಾಮ್ ಕರನ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 15:30 IST
Last Updated 19 ಸೆಪ್ಟೆಂಬರ್ 2020, 15:30 IST
ಸ್ಯಾಮ್ ಕರನ್
ಸ್ಯಾಮ್ ಕರನ್   

ಅಬುಧಾಬಿ (ಪಿಟಿಐ): ಶುಕ್ರವಾರವಷ್ಟೇ ಅಬುಧಾಬಿಗೆ ಬಂದಿಳಿದಿದ್ದ ಸ್ಯಾಮ್ ಕರನ್ ಶನಿವಾರ ಮುಂಬೈ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದರು.

ಜೀವ ಸುರಕ್ಷಾ ನಿಯಮದ ಪ್ರಕಾರ; ಟೂರ್ನಿಯಲ್ಲಿ ಆಡುವ ಮುನ್ನ ಆರು ದಿನಗಳ ಕ್ವಾರಂಟೈನ್ (ಪ್ರತ್ಯೇಕವಾಸ) ನಿಯಮ ಪಾಲಿಸಬೇಕು. ಆದರೆ ಆಸ್ಟ್ರೇಲಿಯಾದ ಸ್ಯಾಮ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ ನಂತರ ಇಲ್ಲಿಗೆ ಬಂದಿದ್ದರು.

ಯುಎಇಗೆ ಬರುವ ಮುನ್ನ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ತಾವೆಲ್ಲರೂ ಈಗಾಗಲೇ ಜೀವಸುರಕ್ಷಾ ವಲಯದಲ್ಲಿ ಆಡಿ ಬಂದಿರುವುದರಿಂದ ಕ್ವಾರಂಟೈನ್ ನಿಯಮ ಕಡಿತ ಮಾಡಬೇಕು ಎಂದು ಮನವಿ ಮಾಡಿದ್ದರು.

ADVERTISEMENT

ಆದರೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಚೆನ್ನೈ ತಂಡದಲ್ಲಿ ಸ್ಯಾಮ್ ಕರನ್ ಕಣಕ್ಕಿಳಿದಿದ್ದರಿಂದ ಅವರೊಂದಿಗೆ ಬಂದಿರುವ ಉಳಿದ ಆಟಗಾರರಿಗೂ ಕ್ವಾರಂಟೈನ್ ನಿಯಮದಿಂದ ರಿಯಾಯಿತಿ ನೀಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.