ADVERTISEMENT

ತುಳಸಿ ಗಿಡಕ್ಕೆ ಹೀಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ

ಎಲ್.ವಿವೇಕಾನಂದ ಆಚಾರ್ಯ
Published 28 ಅಕ್ಟೋಬರ್ 2025, 5:24 IST
Last Updated 28 ಅಕ್ಟೋಬರ್ 2025, 5:24 IST
<div class="paragraphs"><p>ಗೆಟ್ಟಿ ಚಿತ್ರ</p></div>

ಗೆಟ್ಟಿ ಚಿತ್ರ

   

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ. ಈ ಗಿಡವನ್ನು ನಿತ್ಯ ಪೂಜೆ ಮಾಡುವುದರಿಂದ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ತುಳಸಿ ಪೂಜೆಯಿಂದ ಎನೆಲ್ಲಾ ಲಾಭಗಳು ದೊರೆಯಲಿವೆ ಎಂಬುದನ್ನು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ. 

  • ತುಳಸಿಗೆ ಪೂಜೆ ಸಲ್ಲಿಸುವುದರಿಂದ ಆರೋಗ್ಯದ ಸಮಸ್ಯೆಗಳು ಪರಿಹಾರವಾಗುವುದರ ಜೊತೆ ಮನೆಯಲ್ಲಿ ಶಾಂತಿ ಲಭಿಸುತ್ತದೆ ಎಂಬ ನಂಬಿಕೆ ಇದೆ. 

    ADVERTISEMENT
  • ತುಳಸಿಯ ಜೊತೆ ಸಾಲಿಗ್ರಾಮ, ಗೋಮುತಿ ಚಕ್ರ , ಶ್ರೀ ಕೃಷ್ಣನ ವಿಗ್ರಹ, ಬೆಟ್ಟದ ನೆಲ್ಲಿಕಾಯಿ ಅಥವಾ ನವಿಲುಗರಿ ಇಟ್ಟು ಪೂಜಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

  • ನೈವೇದ್ಯಕ್ಕೆ ಇಂತಹ ಆಹಾರವನ್ನೇ ಇಡಬೇಕು ಎಂಬ ನಿಯಮವಿಲ್ಲ. ಆದರೆ ಶ್ರೀ ಕೃಷ್ಣನಿಗೆ ಪ್ರಿಯವಾದ ಕೆಂಪು ಅವಲಕ್ಕಿ ನೈವೇದ್ಯವಾಗಿ ಇಡುವುದು ಶುಭಕರ. ತುಳಸಿ ಪೂಜೆಯಲ್ಲಿ ಅರಿಶಿನ, ಕುಂಕುಮ, ಹಣ್ಣುಗಳು, ಬಳೆ ಹಾಗೂ ಹೂವು ಇಟ್ಟು ಪೂಜಿಸಬೇಕು. 

  • ಬೆಟ್ಟದ ನೆಲ್ಲಿಕಾಯಿ ದೀಪ (ನೆಲ್ಲಿ ಕಾಯಿಯನ್ನು ಹಚ್ಚಿ ಅದರ ಒಳಭಾಗವನ್ನು ತೆಗೆದು ಅದರೊಳಗೆ ತುಪ್ಪದ ದೀಪವನ್ನು ಹಚ್ಚುವುದು)

  • ಪಂಚ ಗೌವ್ಯ ದೀಪ ( ಪಂಚಾಮೃತವನ್ನು ಬಳಸಿಕೊಂಡು ಗೋದಿ ಇಟ್ಟಿನಿಂದ ಬಟ್ಟಲು ಆಕಾರದ ದೀಪ ತಯಾರಿಸಿ ಅದರೊಳಗೆ ತುಪ್ಪದ ದೀಪ ಹಚ್ಚುವುದು)

  • ತುಳಸಿ ಪೂಜೆಗೆ ಮುನ್ನ ಗಣಪತಿಗೆ ಪೂಜೆ ಸಲ್ಲಿಸಬೇಕು. ಬಳಿಕ ಮನೆ ದೇವರನ್ನು ಪೂಜಿಸಿ, ತುಳಸಿ ಹಾಗೂ ಶ್ರೀ ವಿಷ್ಣುಗೆ ಪೂಜೆ ಸಲ್ಲಿಸಬೇಕು.

  • ಪೂಜೆಯ ಸಂದರ್ಭದಲ್ಲಿ ಕನಿಷ್ಠ ಐವರು ಮುತ್ತೈದೆಯರನ್ನು ಆಹ್ವಾನಿಸಿ, ಅವರಿಗೆ ಅರಿಶಿನ, ಕುಂಕುಮ ಕೊಟ್ಟು ಅವರ ಆಶೀರ್ವಾದವನ್ನು ಪಡೆಯುವುದು ಶುಭಕರ ಎಂದು ಜ್ಯೋತಿಷಿ ಎಲ್‌.ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.