ADVERTISEMENT

ದೀಪಾವಳಿ: ಉಪವಾಸ ಮಾಡುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ಎಲ್.ವಿವೇಕಾನಂದ ಆಚಾರ್ಯ
Published 16 ಅಕ್ಟೋಬರ್ 2025, 6:10 IST
Last Updated 16 ಅಕ್ಟೋಬರ್ 2025, 6:10 IST
   

ಪುರಾಣಗಳ ಪ್ರಕಾರ ಉಪವಾಸ ಮಾಡುವುದರಿಂದ ದೇವರ ಅನುಗ್ರಹ ದೊರೆಯಲಿದೆ ಎಂಬ ನಂಬಿಕೆ ಇದೆ. ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಉಪವಾಸ ಮಾಡುವುದರಿಂದ ಸಿಗುವ ಲಾಭಗಳೇನು? ಎಂಬ ಮಾಹಿತಿಯನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ತಿಳಿಸಿ ಕೊಟ್ಟಿದ್ದಾರೆ. 

ಉಪವಾಸ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಅವರು ತಿಳಿಸಿದ್ದಾರೆ. ಹಾಗಿದ್ದರೆ, ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.

  • ‌‌ಹೆಣ್ಣು ಮಕ್ಕಳು ಋತುಚಕ್ರದ ಸಂದರ್ಭದಲ್ಲಿ ಐದು ದಿನಗಳ ಕಾಲ ಉಪವಾಸ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ.

    ADVERTISEMENT
  • ಸಂಕಲ್ಪದಿಂದ ಉಪವಾಸ ವ್ರತ ಆಚರಿಸಬೇಕು.

  • ಉಪವಾಸ ಸಂಕಲ್ಪವನ್ನು ಬ್ರಹ್ಮ ಮುಹೂರ್ತದಲ್ಲಿ ತೆಗೆದುಕೊಳ್ಳಬೇಕು.

  • ಉಪವಾಸ ವ್ರತ ಮಾಡುವ ದಿನ ತಲೆಗೆ ಸ್ನಾನ ಮಾಡಬೇಕು.

  • ಉಪವಾಸ ಮಾಡುವವರು ನಿರ್ಜಲ (ಏನನ್ನೂ ಸೇವಿಸದೆ) ಉಪವಾಸ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ.  ಆರೋಗ್ಯ ಸಮಸ್ಯೆ ಇರುವವರು, ಹಾಲು, ಹಣ್ಣು ಸೇವಿಸಬಹುದು.

  • ಉಪವಾಸದ ದಿನದಂದು ನಕರಾತ್ಮಕ ಯೋಚನೆ ಮಾಡಬಾರದು. ಮಂತ್ರಗಳ ಪಠಣೆ, ಪ್ರಾರ್ಥನೆ, ಶುದ್ಧಮಾತು ಹಾಗೂ ಶಾಂತಿಯಿಂದ ಇರಬೇಕು ಎಂದು ಜ್ಯೋತಿಷ ಹೇಳುತ್ತದೆ.

  • ಬೇರೆಯವರ ಬಗ್ಗೆ ಚಿಂತಿಸುವುದು, ಜಗಳ ಮಾಡುವುದು, ಅಸೂಯೆ ಪಡುವುದನ್ನು ಮಾಡಲೇ ಬಾರದು ಎಂದು ಹೇಳಲಾಗಿದೆ.

  • ಉಪವಾಸ ಮಾಡುವ ದಿನ ಮಧ್ಯಾಹ್ನದ ಸಮಯದಲ್ಲಿ ಮಲಗಬಾರದು.

  • ಉಪವಾಸದ ಸಂದರ್ಭದಲ್ಲಿ ಗಂಡ ಹೆಂಡತಿ ದೈಹಿಕ ಸಂಪರ್ಕ ಹೊಂದಬಾರದು.

  • ಹಾಸಿಗೆ ಮೇಲೆ ಮಲಗಬಾರದು, ಚಾಪೆಯ ಮೇಲೆ ಮಲಗುವುದು ಉತ್ತಮ ಎಂದು ಪರಿಗಣಿಸಲಾಗಿದೆ.

  • ಉಪವಾಸದ ದಿನದಂದು ಅನುಚಿತ ಸ್ಥಳಗಳಿಗೆ ಹೋಗಬಾರದು. ಉದಾಹರಣೆ: ಸ್ಮಶಾನ ಅಥವಾ ನಿರ್ಜನ ಪ್ರದೇಶಗಳಿಗೆ ಹೋಗಬಾರದು. ಅತ್ಯಂತ ಅವಶ್ಯಕತೆ ಇದ್ದಲ್ಲಿ ಮಾತ್ರ ಹೋಗಬಹುದು.

ಇಂತಹ ನಿಯಮಗಳನ್ನು ಪಾಲಿಸಿ ಉಪವಾಸ ವ್ರತ ಮಾಡುವುದರಿಂದ ಸಂಕಲ್ಪ ಈಡೇರುತ್ತವೆ ಎಂದು ಜ್ಯೋತಿಷ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.