ADVERTISEMENT

Maharashtra Portfolio | ಖಾತೆ ಹಂಚಿಕೆ ಬಗ್ಗೆ ಕೆಲವರಿಗೆ ಅತೃಪ್ತಿ ಇದೆ: ಅಜಿತ್

ಪಿಟಿಐ
Published 22 ಡಿಸೆಂಬರ್ 2024, 14:45 IST
Last Updated 22 ಡಿಸೆಂಬರ್ 2024, 14:45 IST
<div class="paragraphs"><p>ಏಕನಾಥ ಶಿಂದೆ, ದೇವೇಂದ್ರ ಫಡಣವೀಸ್ (ಮಧ್ಯ) ಮತ್ತು ಅಜಿತ್ ಪವಾರ್</p></div>

ಏಕನಾಥ ಶಿಂದೆ, ದೇವೇಂದ್ರ ಫಡಣವೀಸ್ (ಮಧ್ಯ) ಮತ್ತು ಅಜಿತ್ ಪವಾರ್

   

ಬಾರಾಮತಿ: ಸಚಿವರ ಸಂಖ್ಯೆ ಹೆಚ್ಚು ಇರುವುದರಿಂದ ಪ್ರತಿಯೊಬ್ಬರಿಗೂ ಖಾತೆಗಳನ್ನು ಹಂಚುವಾಗಿ ಕೆಲವೊಂದು ಇತಿಮಿತಿಗಳಿರುತ್ತವೆ ಎಂಬುದನ್ನು ಒಪ್ಪಿಕೊಂಡಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್, ‘ಕೆಲವರಿಗೆ ಅತೃಪ್ತಿಯಾಗಿರುವುದು ನಿಜ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಶನಿವಾರ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡು ವಾರಗಳ ಬಳಿಕ ಈ ಪ್ರಕ್ರಿಯೆ ನಡೆದಿದೆ.

ADVERTISEMENT

ಬಾರಾಮತಿಯಲ್ಲಿ ಭಾನುವಾರ ರೋಡ್‌ ಶೋದಲ್ಲಿ ಪಾಲ್ಗೊಂಡ ಪವಾರ್, ‘ಸಚಿವರ ಸಂಖ್ಯೆ ಹೆಚ್ಚು ಇದ್ದು, ಮುಖ್ಯಮಂತ್ರಿ ಅವರು ಅಷ್ಟೂ ಮಂದಿಗೆ ಖಾತೆ ಹಂಚಿಕೆ ಮಾಡಬೇಕಾಗಿತ್ತು. ಕೆಲವರು ತಮ್ಮ ಪಾಲಿಗೆ ಬಂದ ಖಾತೆಯಿಂದ ಸಂತಸಗೊಂಡಿದ್ದರೆ, ಕೆಲವರಿಗೆ ಅಸಮಾಧಾನ ಉಂಟಾಗಿದೆ’ ಎಂದಿದ್ದಾರೆ.

ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿರುವ ಪವಾರ್‌ ಅವರು, ಸೋಮವಾರ ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.