ನವದಹೆಲಿ:ಡೇವಿಸ್ ಕಪ್ ಪಂದ್ಯಾವಳಿಯ ಭಾರತ–ಪಾಕಿಸ್ತಾನ ಪಂದ್ಯವನ್ನು ಆಯೋಜಿಸಲು ಕಜಕಿಸ್ತಾನ ರಾಜಧಾನಿ ನೂರ್–ಸುಲ್ತಾನ್ ನಗರವನ್ನು ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್(ಐಟಿಎಫ್) ಆಯ್ಕೆ ಮಾಡಿದೆ.
ಪಾಕಿಸ್ತಾನದಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಸುರಕ್ಷತೆ ಹಾಗೂ ಭದ್ರತೆಯ ಕಾರಣದಿಂದಾಗಿ ತಟಸ್ಥ ಸ್ಥಳಕ್ಕೆ ವರ್ಗಾಯಿಸಲುಐಟಿಎಫ್ನ ಸ್ವತಂತ್ರ ಮಂಡಳಿ ನವೆಂಬರ್ 4ರಂದು ನಡೆದ ಸಭೆಯಲ್ಲಿ ನಿರ್ಧರಿಸಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪಾಕಿಸ್ತಾನದಲ್ಲೇ ಪಂದ್ಯ ಆಯೋಜಿಸುವಂತೆ ಮನವಿ ಮಾಡಿದ್ದ ಪಾಕಿಸ್ತಾನ ಟೆನಿಸ್ ಫೆಡರೇಷನ್(ಪಿಟಿಎಫ್), ‘ಭಾರತದ ಯಾತ್ರಾರ್ಥಿಗಳು ಯಾವುದೇ ಭಯವಿಲ್ಲದೆ ಪಾಕಿಸ್ತಾನಕ್ಕೆ ಬರಬಹುದು ಎಂದಾದ ಮೇಲೆ, ಇಸ್ಲಾಮಾಬಾದ್ನಲ್ಲಿ ನಡೆಯುವ ಪಂದ್ಯದಲ್ಲಿ ಆಡಲು ಭಾರತ ತಂಡಕ್ಕೇಕೆ ಸಾಧ್ಯವಿಲ್ಲ’ ಎಂದು ವಾದಿಸಿತ್ತು.
‘ಪಂದ್ಯವು ನೂರ್–ಸುಲ್ತಾನ್ನಲ್ಲಿ ನಡೆಯಲಿದೆ ಎಂಬುದಾಗಿ ಐಟಿಎಫ್ ನಮಗೆ ತಿಳಿಸಿದೆ. ಪಿಟಿಎಫ್ ಮನವಿ ತಿರಸ್ಕರಿಸಲಾಗಿದೆಯೇ ಎಂಬುದು ಗೊತ್ತಿಲ್ಲ. ತಡರಾತ್ರಿ ನಡೆಸಿದ ಸಂವಹನದಲ್ಲಿ ಪಂದ್ಯ ನಿಗದಿಯಾಗಿರುವ ಹೊಸ ಸ್ಥಳದ ಬಗ್ಗೆ ಮಾತ್ರವೇ ತಿಳಿಸಲಾಯಿತು’ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಸಿಇಒ ಅಕುಓರಿ ಬಿಶ್ವದೀಪ್ ತಿಳಿಸಿದ್ದಾರೆ.
ಇದನ್ನೂ ಓದಿ:ಡೇವಿಸ್ ಕಪ್ ಸ್ಥಳಾಂತರ?
ಪಂದ್ಯವು ಸೆಪ್ಟೆಂಬರ್ನಲ್ಲಿಯೇ ನಡೆಯಬೇಕಿತ್ತು. ಆದರೆ, ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ 370ನೇ ವಿಧಿಯನ್ನುಭಾರತಆಗಸ್ಟ್ನಲ್ಲಿ ರದ್ದು ಮಾಡಿತ್ತು. ಅದಾದ ಬಳಿಕ ಪಾಕ್ ಜೊತೆಗಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹಳಸಿತ್ತು. ಹೀಗಾಗಿಭಾರತವು ಸುರಕ್ಷತೆ ಸಂಬಂಧ ಕಳವಳ ವ್ಯಕ್ತಪಡಿಸಿತ್ತು. ಹೀಗಾಗಿಪಂದ್ಯವನ್ನು ನವೆಂಬರ್ 29–30ಕ್ಕೆ ಮುಂದೂಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.