ADVERTISEMENT

ಕೇಂದ್ರ, ರಾಜ್ಯ ಸರ್ಕಾರದ ಸೌಲಭ್ಯಕ್ಕೆ ಇ-ಕೆವೈಸಿ ಕಡ್ಡಾಯ: ಇಂದೇ ಅಪ್‌ಡೇಟ್ ಮಾಡಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2026, 8:04 IST
Last Updated 26 ಫೆಬ್ರುವರಿ 2026, 8:04 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಕೇಂದ್ರ ಸರ್ಕಾರದ ಹೊಸ ನೀತಿಯಂತೆ ಪಿಎಂ-ಕಿಸಾನ್ ಯೋಜನೆ ಸೇರಿದಂತೆ ಇತರೆ ಯೋಜನೆಗಳಾದ ಬರ ಪರಿಹಾರ, ಬೆಳೆ ವಿಮೆ ಮುಂತಾದ ಯೋಜನೆಗಳಿಗೆ ಕೇಂದ್ರ ನೊಂದಾಯಿತ ರೈತರ ಸಂಖ್ಯೆ ಕಡ್ಡಾಯಗೊಳಿಸಲು ಫೆಬ್ರುವರಿ 26 ಕೊನೆಯ ದಿನವಾಗಿದ್ದು, ರೈತರು ‘ಫ್ರೂಟ್ಸ್’ ತಂತ್ರಾಂಶದಲ್ಲಿ ಇ-ಕೆವೈಸಿ, ಮೊಬೈಲ್ ನಂಬರ್‌ಗಳನ್ನು ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ರೈತರ ಹೆಸರಿನಲ್ಲಿರುವ ಎಲ್ಲಾ ಭೂಹಿಡುವಳಿಗಳನ್ನು ಕಡ್ಡಾಯವಾಗಿ ತಮ್ಮ ಎಫ್.ಐ.ಡಿಯಲ್ಲಿ ಸೇರ್ಪಡಿಸಿಕೊಳ್ಳುವುದು ಮತ್ತು ರೈತರ ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ನೀಡುವುದು ಕಡ್ಡಾಯವಾಗಿದೆ.

ADVERTISEMENT

ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ, ತಾಲ್ಲೂಕು ಕೃಷಿ ನಿರ್ದೇಶಕರನ್ನಾಗಲಿ ಅಥವಾ ಹಿರಿಯ ಸಹಾಯಕ ನಿರ್ದೇಶಕರನ್ನಾಗಲಿ ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಬರ ಪರಿಹಾರ, ಬೆಳೆ ವಿಮೆ ಹಾಗೂ ಪಿಎಂ ಕಿಸಾನ್ ಯೋಜನೆಯಡಿ ಸೌಲಭ್ಯ ಪಡೆಯಲು ಕೇಂದ್ರದ ಫಾರ್ಮರ್ ಐಡಿ ಅಗತ್ಯವಾಗಿದೆ. ಇ-ಕೆವೈಸಿ ಮಾಡಿಸುವಂತೆ, ಇಲ್ಲವಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಎನ್ನುವ ಎಚ್ಚರಿಕೆ ಸಂದೇಶವನ್ನು ರೈತರಿಗೆ ನೀಡಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ವರ್‌ ಸಮಸ್ಯೆ ಉಂಟಾಗಿದ್ದು, ರೈತರು ಪರದಾಡಿದ್ದಾರೆ.

ಯಾರು ಅಪ್ಡೇಟ್ ಮಾಡಬೇಕು?

* ಫಲಾನುಭವಿ ರೈತರು

ಎಲ್ಲಿ ಮಾಡಬೇಕು?

* ರೈತ ಸಂಪರ್ಕ ಕೇಂದ್ರ

* ಕೃಷಿ ಇಲಾಖೆ ಕಚೇರಿ

* ತೋಟಗಾರಿಕೆ ಇಲಾಖೆ ಕಚೇರಿ

* ರೇಷ್ಮೆ ಇಲಾಖೆ ಕಚೇರಿ

* ಗ್ರಾಮ ಒನ್ ಸೇವಾ ಕೇಂದ್ರ

ಅಗತ್ಯ ದಾಖಲೆಗಳು

* ಆಧಾರ್ ಕಾರ್ಡ್

* ಸಕ್ರಿಯ ಮೊಬೈಲ್ ಸಂಖ್ಯೆ

* ಜಮೀನು ವಿವರ

ಕಡ್ಡಾಯ ಪ್ರಕ್ರಿಯೆಗಳು

* ಇ-ಕೆವೈಸಿ

* ರೈತರ ಸಮ್ಮತಿ ಅರ್ಜಿ/ ಪತ್ರ

* ಭೂ ಘೋಷಣಾ ಪ್ರಮಾಣಪತ್ರ

ಯಾವ ಸೌಲಭ್ಯಗಳಿಗೆ ಅಗತ್ಯ?

* ಪಿಎಂ-ಕಿಸಾನ್ ಯೋಜನೆ (₹6000)

* ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)

* ಬೆಳೆ ವಿಮೆ

ಹಣ ಹೇಗೆ ಬರುತ್ತದೆ

ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.