ಚಿತ್ರ ಕೃಪೆ: udayatv
ಬೆಂಗಳೂರು: ಉದಯ ಟಿವಿಯಲ್ಲಿ ಇತ್ತೀಚೆಗೆ ನಡೆದ ಯುವ ದಸರಾ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟಿ ಮೇಘನಾ ರಾಜ್ ಹಾಗೂ ನಟ ಧ್ರುವ ಸರ್ಜಾ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಚಿರು ಫೋಟೊ ನೋಡಿದ ಧ್ರುವ ಭಾವುಕರಾಗಿ ಮಾತನಾಡಿದ್ದಾರೆ.
‘ನಾನು ಚಿರು ಅಣ್ಣ ಒಟ್ಟಿಗೆ ಓದಿ ಬೆಳೆದೆವು. ಯಾವಾಗಲೂ ಒಟ್ಟಿಗೆ ಇರುತ್ತಿದ್ದೆವು. ಆದರೆ ಕೆಲವು ವರ್ಷಗಳಿಂದ ಅವನು ಬೇರೆ ಊರಿಗೆ ಹೋಗಿದ್ದಾನೆ‘ ಎಂದು ನಟ ಧ್ರುವ ಭಾವುಕರಾದರು. ಅದೇ ವೇದಿಕೆಯಲ್ಲಿ ಮಾತಾನಾಡಿದ ನಟಿ ಮೇಘನಾ ರಾಜ್, ಧ್ರುವ ನನ್ನ ತಮ್ಮನಂತೆ ಎಂದಿದ್ದಾರೆ.
ಪ್ರೇಮ್ ನಿರ್ದೇಶನದ ‘ಕೆಡಿ ಸಿನಿಮಾದಲ್ಲಿ ಧುವ, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರೀಷ್ಮಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಈಗಾಗಲೇ ಈ ಚಿತ್ರ ಟ್ರೇಲರ್ ಅನಾವರಣಗೊಂಡಿದ್ದು, ಸದ್ಯದಲ್ಲೆ ಸಿನಿಮಾ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.