ADVERTISEMENT

Ayurveda Medicine: ಚಳಿಗಾಲದಲ್ಲಿ ಚಿಣ್ಣರ ಆರೈಕೆ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 12:58 IST
Last Updated 18 ಡಿಸೆಂಬರ್ 2025, 12:58 IST
   

ಚಳಿಗಾಲದಲ್ಲಿ (ಹೇಮಂತ ಋತು) ಎಲ್ಲಾ ವಯಸ್ಸಿನವರಲ್ಲೂ ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ಮಕ್ಕಳು ಹೆಚ್ಚಾಗಿ ಅನಾರೋಗಕ್ಕೆ ಒಳಗಾಗುತ್ತಾರೆ. ಹಾಗಾಗಿ ಆ ಸಮಯದಲ್ಲಿ ಮಕ್ಕಳನ್ನು ರಕ್ಷಿಸಲು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಚಳಿಗಾಲದಲ್ಲಿ ಮಕ್ಕಳ ಆರೈಕೆಗೆ ಸಲಹೆಗಳು

  • ಎದೆ ಮತ್ತು ಕಿವಿಗಳನ್ನು ಮುಚ್ಚುವಂತೆ ಬೆಚ್ಚಗಿನ ಬಟ್ಟೆ ಧರಸಿ

    ADVERTISEMENT
  • ಬೆಳಗಿನ ಮತ್ತು ರಾತ್ರಿ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು.

  • ತೇವ ಬಟ್ಟೆಗಳನ್ನು ತಕ್ಷಣ ಬದಲಾಯಿಸುವುದು

  • ಅಭ್ಯಂಗ ಮತ್ತು ಬಾಹ್ಯೋಪಚಾರ

    ಕರ್ಪೂರ ತೈಲ (Karpoora Taila)

ಎದೆ, ಬೆನ್ನು ಮತ್ತು ಪಾದಗಳಿಗೆ ಅಲ್ಪ ಪ್ರಮಾಣದಲ್ಲಿ ಹಚ್ಚುವುದು

ಕಫ ಶಮನ ಮಾಡಿ ಉಸಿರಾಟ ಸುಗಮಗೊಳಿಸುತ್ತದೆ.

ಲವಂಗ ತೈಲ (Lavanga Taila):

ಎದೆ ಅಥವಾ ಗಂಟಲು ಭಾಗಕ್ಕೆ ಹೊರಗಿನಿಂದ ಹಚ್ಚುವುದು

ಕೆಮ್ಮು ಮತ್ತು ಗಂಟಲು ನೋವಿನಲ್ಲಿ ಉಪಕಾರಿ

(ಗಮನಿಸಿ: ಶಿಶುಗಳಿಗೆ(ತಿಂಗಳ ಮಕ್ಕಳು) ಮತ್ತು ಸಣ್ಣ ಮಕ್ಕಳಿಗೆ ವೈದ್ಯರ ಸಲಹೆಯಿಲ್ಲದೆ ನೇರವಾಗಿ ಬಳಸಬಾರದು)

ಬಿಸಿ ನೀರಿನ ಶಾಖ (Steam Inhalation)

ಬಿಸಿ ನೀರಿಗೆ ತುಳಸಿ, 2 ಹನಿ ಕರ್ಪೂರ ತೈಲ ಅಥವಾ ಅಲ್ಪ ಪ್ರಮಾಣದ ಅಜ್ವೈನ್ ಹಾಕಿ

ದಿನಕ್ಕೆ ಒಮ್ಮೆ, 5–10 ನಿಮಿಷ ಶಾಖ ಕೊಡಿಸಿ. ಹೀಗೆ ಮಾಡುವುದರಿಂದ ಸೀನುವಿಕೆ ಹಾಗೂ ಕಫ ಕಡಿಮೆ ಮಾಡುತ್ತದೆ.

ಗಮನಿಸಿ: ( 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ, ಹಿರಿಯರ ಮೇಲ್ವಿಚಾರಣೆಯಲ್ಲಿ )

ಅಮೃತಬಳ್ಳಿ ಕಷಾಯದ ಪ್ರಯೋಜನಗಳು:

  • ಅಮೃತಬಳ್ಳಿ ಕಷಾಯ – ರೋಗನಿರೋಧಕ ಶಕ್ತಿಗೆ ಆಯುರ್ವೇದದ ವರ

  • ಅಮೃತಬಳ್ಳಿ (ಗುಡೂಚಿ) ಆಯುರ್ವೇದದಲ್ಲಿ ಪ್ರಸಿದ್ಧ ಔಷಧಿ.

  • ರೋಗನಿರೋಧಕ ಶಕ್ತಿ ವೃದ್ಧಿ

  • ಪದೇಪದೇ ಬರುವ ಜ್ವರ, ನೆಗಡಿ, ಕೆಮ್ಮಿನಲ್ಲಿ ಉಪಕಾರಿ

  • ದೇಹದ ದೋಷ (ವಾತ, ಪಿತ್ತ, ಕಫ) ನಿವಾರಣೆಗೆ ಸಹಕಾರಿ ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.

ಲೇಖಕರು: ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು,

ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.