ADVERTISEMENT

ತೆಲಂಗಾಣ: 100 ದಿನಗಳಲ್ಲಿ ₹500ಕ್ಕೆ ಎಲ್‌ಪಿಜಿ ಸಿಲಿಂಡರ್; ಸಚಿವ ಉತ್ತಮ್‌ ಕುಮಾರ್

ಪಿಟಿಐ
Published 12 ಡಿಸೆಂಬರ್ 2023, 12:36 IST
Last Updated 12 ಡಿಸೆಂಬರ್ 2023, 12:36 IST
<div class="paragraphs"><p>ಸಚಿವ ಉತ್ತಮ್‌ ಕುಮಾರ್</p></div>

ಸಚಿವ ಉತ್ತಮ್‌ ಕುಮಾರ್

   

ಹೈದರಾಬಾದ್‌: ತೆಲಂಗಾಣ ಜನತೆಗೆ ₹500ಕ್ಕೆ ಎಲ್‌ಪಿಜಿ ಸಿಲಿಂಡರ್‌ ಮತ್ತು ರೈತರಿಗೆ ಭತ್ತ ಖರೀದಿಗೆ ಪ್ರತಿ ಕ್ವಿಂಟಲ್‌ಗೆ ₹500 ಪ್ರೋತ್ಸಾಹ ಧನ ಯೋಜನೆಗಳನ್ನು ಅಧಿಕಾರಕ್ಕೆ ಬಂದ 100 ದಿನಗಳ ಒಳಗಾಗಿ ಜಾರಿಗೆ ತರಲು ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ ಎಂದು ನಾಗರಿಕ ಸರಬರಾಜು ಸಚಿವ ಎನ್‌. ಉತ್ತಮ್‌ ಕುಮಾರ್‌ ರೆಡ್ಡಿ ತಿಳಿಸಿದರು.

ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಆರ್‌ಎಸ್‌ ಸರ್ಕಾರ ಆರ್ಥಿಕ ನೆರವು ನೀಡಲು ವಿಫಲವಾದ ಕಾರಣ ನಾಗರಿಕ ಸರಬರಾಜು ನಿಗಮದ ಒಟ್ಟು ಸಾಲವು ₹56,000 ಕೋಟಿಗೆ ತಲುಪಿದೆ ಎಂದು ತಿಳಿಸಿದರು.

ADVERTISEMENT

ಪಾಲಿಕೆಗೆ ಸೇರಿದ ಸುಮಾರು ₹18,000 ಕೋಟಿ ಮೌಲ್ಯದ 8.8 ಮಿಲಿಯನ್‌ ಟನ್‌ ಭತ್ತವು ಯಾವುದೇ ಭದ್ರತೆ ಇಲ್ಲದೆ, ಬ್ಯಾಂಕ್‌ ಗ್ಯಾರಂಟಿ ಇಲ್ಲದೆ ಬಿದ್ದಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು ಹಾಗೂ ಸಂಪುಟದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರೆಡ್ಡಿ ಹೇಳಿದರು.

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅಕ್ಕಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನೀಡಲು ರಾಜ್ಯ ಮತ್ತು ಕೇಂದ್ರವು ಪ್ರತಿ ಕೆ.ಜಿ ಅಕ್ಕಿಗೆ ₹39 ವ್ಯಯಿಸುತ್ತಿದೆ. ಆದ್ದರಿಂದ, ಈ ವ್ಯವಸ್ಥೆಯು ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.