ADVERTISEMENT

ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಗೆಹಲೋತ್ ಹೊರಗೆ: ಸೆಲ್ಜಾ, ವೇಣುಗೋಪಾಲ್‌ಗೆ ಅವಕಾಶ?

ಐಎಎನ್ಎಸ್
Published 27 ಸೆಪ್ಟೆಂಬರ್ 2022, 5:36 IST
Last Updated 27 ಸೆಪ್ಟೆಂಬರ್ 2022, 5:36 IST
ಕುಮಾರಿ ಸೆಲ್ಜಾ ಮತ್ತು ಕೆ.ಸಿ ವೇಣುಗೋಪಾಲ್‌
ಕುಮಾರಿ ಸೆಲ್ಜಾ ಮತ್ತು ಕೆ.ಸಿ ವೇಣುಗೋಪಾಲ್‌    

ನವದೆಹಲಿ: ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಅಶೋಕ್ ಗೆಹಲೋತ್‌ ಅವರನ್ನು ಹೊರಗಿಡಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ಮಂಗಳವಾರ ತಿಳಿಸಿವೆ. ಹೀಗಾಗಿ ಸೆಲ್ಜಾ ಕುಮಾರಿ ಅಥವಾ ರಾಹುಲ್ ಗಾಂಧಿ ಅವರ ಆಪ್ತರೆನಿಸಿಕೊಂಡಿರುವ ಕೆ.ಸಿ. ವೇಣುಗೋಪಾಲ್ ಅವರನ್ನು ಸ್ಪರ್ಧೆಗೆ ನಿಯೋಜಿಸುವ ಸಾಧ್ಯತೆಗಳಿವೆ.

ಆದರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.

ಸೋಮವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಪಕ್ಷದ ಅಧ್ಯಕ್ಷರಾಗಲು ಬಯಸುವುದಿಲ್ಲ ಎಂದು ತಿಳಿಸಿದ್ದರು. ಮಧ್ಯಪ್ರದೇಶದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಬಯಸಿರುವುದಾಗಿಯೂ ಹೇಳಿದ್ದರು.

ADVERTISEMENT

ರಾಜಸ್ಥಾನದಲ್ಲಿ ರಾಜಕೀಯ ಪರಿಸ್ಥಿತಿ ಉಲ್ಬಣಿಸಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಚಾರದಲ್ಲಿ ಹೈಕಮಾಂಡ್‌ ‘ಪ್ಲಾನ್ ಬಿ’ ಬಗ್ಗೆ ಯೋಚನೆ ಮಾಡುವಂತೆ ಆಗಿದೆ.

‘ಪ್ಲಾನ್‌ ಬಿ’ನಂತೆ ಸಂಭಾವ್ಯರಲ್ಲಿ ಕಮಲನಾಥ್ ಅವರು ಸ್ಪರ್ಧೆಗೆ ನಿರಾಕರಿಸಿದ್ದಾರೆ. ಹೀಗಾಗಿ ಸದ್ಯ ಕಾಂಗ್ರೆಸ್‌ ಹೈಕಮಾಂಡ್‌ ಬೇರೆ ನಾಯಕರತ್ತ ನೋಡುವಂತೆ ಆಗಿದೆ.

ಇದನ್ನೂ ಓದಿ ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.