ADVERTISEMENT

ಕಾಂತಾರ ದೈವಕ್ಕೆ ಅಪಮಾನ: ರಣವೀರ್‌ ಸಿಂಗ್‌ಗೆ ತಿರುಗೇಟು ಕೊಟ್ರಾ ರಿಷಬ್‌ ಶೆಟ್ಟಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2025, 3:04 IST
Last Updated 17 ಡಿಸೆಂಬರ್ 2025, 3:04 IST
<div class="paragraphs"><p>ಕಾಂತಾರ ಸಿನಿಮಾದ ದೃಶ್ಯವನ್ನು ನಕಲು ಮಾಡಿದ್ದ ನಟ ರಣ್‌ವೀರ್‌ ಸಿಂಗ್‌ </p></div>

ಕಾಂತಾರ ಸಿನಿಮಾದ ದೃಶ್ಯವನ್ನು ನಕಲು ಮಾಡಿದ್ದ ನಟ ರಣ್‌ವೀರ್‌ ಸಿಂಗ್‌

   

ನವದೆಹಲಿ: ಇತ್ತೀಚಿನ ಕಾರ್ಯಕ್ರಮಯೊಂದರಲ್ಲಿ ಕಾಂತಾರ ಚಿತ್ರದಲ್ಲಿ ರಿಷಬ್‌ ಶೆಟ್ಟಿಯ ದೈವದ ಪಾತ್ರವನ್ನು ಅಣುಕಿಸಿ, ದೈವ ಎನ್ನುವ ಬದಲು ದೆವ್ವ ಎಂದಿದ್ದರು. ಇದು ದೈವ ಆರಾಧಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿವಾದದ ಬೆನ್ನಲ್ಲೇ ರಿಷಬ್‌ ಶೆಟ್ಟಿ ಮೌನ ಮುರಿದಿದ್ದಾರೆ.

ಚೆನ್ನೈನಲ್ಲಿ ನಡೆದ ಬಿಹೈಂಡ್‌ವುಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್‌ ಶೆಟ್ಟಿ, ದೈವ ಅನುಕರಣೆ ಸಂಬಂಧ ರಣವೀರ್‌ ಸಿಂಗ್‌ ಹೆಸರನ್ನು ಉಲ್ಲೇಖಿಸದೆಯೇ ತಿರುಗೇಟು ನೀಡಿದ್ದಾರೆ.

ADVERTISEMENT

ಕಾಂತಾರ ಚಿತ್ರದಲ್ಲಿ ದೈವಗಳ ಬಗ್ಗೆ ಹಾಗೂ ಆಚರಣೆಗಳ ಬಗ್ಗೆ ತಿಳಿಸಲಾಗಿದೆ. ಎಲ್ಲೆಂದರಲ್ಲಿ ದೈವಗಳ ಅನುಕರಣೆ ಸರಿಯಲ್ಲ. ಇದು ಸೂಕ್ಷ್ಮವಾದ ವಿಚಾರವಾಗಿದೆ. ಧಾರ್ಮಿಕ ಆಚರಣೆಗಳ ಪಾವಿತ್ರ್ಯತೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಎಲ್ಲೆಂದರಲ್ಲಿ ವೇದಿಕೆ ಕಾರ್ಯಕ್ರಮಗಳಲ್ಲಿ ದೈವಗಳನ್ನು ಅನುಕರಣೆ ಸರಿಯಲ್ಲ. ನಾನು ಪ್ರತಿ ಬಾರಿಯೂ ಇದನ್ನೆ ಹೇಳಿದ್ದೇನೆ. ಧಾರ್ಮಿಕ ವಿಚಾರಗಳು ಹಾಗೂ ಆಚರಣೆಗಳಿಗೆ ಧಕ್ಕೆ ತರಬೇಡಿ ಎಂದು ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ. ಕಾಂತಾರ ಸಿನಿಮಾದಲ್ಲಿ ದೈವಗಳ ಆಚರಣೆಗೆ ಸಂಬಂಧಿಸಿದಂತೆ ನಿಷ್ಠೆ ಹಾಗೂ ನಿಯಮಗಳಿಂದ ಪಾತ್ರವನ್ನು ನಿರ್ವಹಿಸಲಾಗಿತ್ತು. ಹಿರಿಯರ ಮಾರ್ಗದರ್ಶನದಲ್ಲಿ ಪಾತ್ರವನ್ನು ಚಿತ್ರೀಕರಿಸಲಾಗಿತ್ತು. ಎಲ್ಲ ಆಚರಣೆಗಳಿಗೆ ಅದರದ್ದೇ ಆದ ನಿಯಮಗಳು ಇರುತ್ತದೆ. ಈ ಆಚರಣೆಗಳು ನಮ್ಮೊಂದಿಗೆ ಭಾವನಾತ್ಮಕವಾದ ಸಂಪರ್ಕ ಹೊಂದಿವೆ ಎಂದು ರಿಷಬ್‌ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

56ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ‘ಕಾಂತಾರ’ ಪ್ರೀಕ್ವೆಲ್‌ನಲ್ಲಿ ಬರುವ ದೈವವನ್ನು ‘ದೆವ್ವ‘ ಎಂದು ಹೇಳಿ ಅಣುಕಿಸಿದರು. ನಟ ರಣ್‌ವೀರ್‌ ಸಿಂಗ್‌ ಹೇಳಿರುವುದು ಚರ್ಚೆಗೆ ಗ್ರಾಸವಾಗಿತ್ತು.

‘ಕಾಂತಾರ’ ಸಿನಿಮಾ ಹಾಗೂ ರಿಷಬ್ ಶೆಟ್ಟಿಯನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದರು. ರಣ್‌ವೀರ್‌ ಸಿಂಗ್ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದರು. ಆ ಬೆನ್ನಲ್ಲೆ ರಣ್‌ವೀರ್‌ ಸಿಂಗ್ ಕ್ಷಮೆ ಕೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.