ADVERTISEMENT

ವಿಧಾನಸಭೆ ಚುನಾವಣೆಗೂ ಮುನ್ನ ವಿಜಯ್ ಪಕ್ಷಕ್ಕೆ 'ಸೀಟಿ' ಹೊಡೆದ ಆಯೋಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2026, 10:50 IST
Last Updated 22 ಜನವರಿ 2026, 10:50 IST
<div class="paragraphs"><p>ಟಿವಿಕೆ ನಾಯಕ, ನಟ ವಿಜಯ್</p></div>

ಟಿವಿಕೆ ನಾಯಕ, ನಟ ವಿಜಯ್

   

ಪಿಟಿಐ ಸಂಗ್ರಹ ಚಿತ್ರ

ಚೆನ್ನೈ: ನಟ, ರಾಜಕಾರಣಿ ವಿಜಯ್‌ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಚುನಾವಣಾ ಆಯೋಗವು ಗುರುವಾರ ಚಿಹ್ನೆ ನಿಗದಿ ಮಾಡಿದೆ.

ADVERTISEMENT

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಇದೇ ವರ್ಷ ಏಪ್ರಿಲ್‌–ಮೇ ಅವಧಿಯಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ, ವಿಸಿಲ್‌ (ಸೀಟಿ) ಚಿಹ್ನೆಯನ್ನು ಟಿವಿಕೆಗೆ ನೀಡಲಾಗಿದೆ.

ಕಮಲ್‌ ಹಾಸನ್‌ ಅವರ ಮಕ್ಕಳ ನಿಧಿ ಮಯಂ (ಎಂಎನ್‌ಎಂ) ಪಕ್ಷಕ್ಕೆ 'ಟಾರ್ಚ್‌' ಚಿಹ್ನೆ ನೀಡಲಾಗಿದೆ. ಈ ಸಂಬಂಧ ಚುನಾವಣಾ ಆಯೋಗವು ಹೇಳಿಕೆ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಎರಡು ಸುತ್ತಿನ ವಿಚಾರಣೆ
ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಟಿವಿಕೆ ಮುಖ್ಯಸ್ಥ ವಿಜಯ್‌ ಅವರನ್ನು ಸಿಬಿಐ ಎರಡು ಸುತ್ತಿನ ವಿಚಾರಣೆಗೆ ಒಳಪಡಿಸಿದೆ.

2025ರ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ಆಯೋಜನೆಗೊಂಡಿದ್ದ ಟಿವಿಕೆ ಸಮಾವೇಶದ ವೇಳೆ ಕಾಲ್ತುಳಿತ ಸಂಭವಿಸಿ, 41 ಮಂದಿ ಮೃತಪಟ್ಟು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಈ ಸಂಬಂಧ ಜನವರಿ 12ರಂದು ಮೊದಲ ಬಾರಿಗೆ ಸಿಬಿಐ ಎದುರು ಹಾಜರಾಗಿದ್ದ ವಿಜಯ್‌, ಜನವರಿ 19ರಂದು ಸತತ ಆರು ತಾಸು ವಿಚಾರಣೆ ಎದುರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.