ADVERTISEMENT

ಅಂಬರೀಷ್‌ ಬಗ್ಗೆ ಓದಲೇಬೇಕಾದ 10 ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 7:41 IST
Last Updated 26 ನವೆಂಬರ್ 2018, 7:41 IST
   

ಬೆಂಗಳೂರು: ದಿಗ್ಗಜ ನಟ ಅಂಬರೀಷ್‌ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ತಬ್ಬಲಿಯಾಗಿದೆ. ಅಂಬರೀಷ್‌ ಅವರ ಸಿನಿಯಾನಮತ್ತು ಜೀವನ ರೋಚಕವಾಗಿದ್ದು ಅವರ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಷಯಗಳು ಸಾಕಷ್ಟಿವೆ. ಈ ಕುರಿತು ಓದಲೆಬೇಕಾದಹತ್ತು ಸುದ್ದಿಗಳು ಇಲ್ಲಿವೆ.

ಅಂಬರೀಷ್‌ ಕುರಿತು ಓದಲೇ ಬೇಕಾದ ಈ ಹತ್ತು ಸುದ್ದಿಗಳು

1) ಅಂಬಿ: ‘ತೆರೆದ ಪುಸ್ತಕ’ಕ್ಕೆ ಉದಾಹರಣೆ
ಅಂಬರೀಷ್ ಅವರನ್ನು ‘ಜೇಡರಬಲೆ’ಯಲ್ಲಿ ಸಂದರ್ಶನ ಮಾಡಬೇಕು ಅನ್ನುವ ಆಸೆ ನನಗೆ ಬಹಳ ದಿನಗಳಿಂದ ಇತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಏನು ಹೇಳುತ್ತಾರೋ, ನನ್ನನ್ನು ಹೇಗೆ ನನ್ನ ಬಲೆಯಲ್ಲೇ ಕೆಡವಿಬಿಡುತ್ತಾರೋ ಎಂಬ ಆತಂಕವೂ ಇತ್ತು. ನನ್ನ ಟಿ.ವಿ. ಸಂದರ್ಶನ ಕಾರ್ಯಕ್ರಮಗಳ ಆರಂಭದ ದಿನದಲ್ಲೇ ಅಂಬರೀಷ್ ಅವರನ್ನು ಭೇಟಿಯಾಗಿದ್ದಾಗ, ‘ಕಾರ್ಯಕ್ರಮದಲ್ಲಿ ಭಾಗವಹಿಸಿ’ ಎಂದು ಅವರನ್ನು ಆಹ್ವಾನಿಸಿದ್ದೆ...ದೀಪಕ್‌ ತಿಮ್ಮಯ

ADVERTISEMENT

2)ಅಂಬಿ ಅಜಾತಶತ್ರು; ಆದರೆ ಅವನಿಗೆ ಅವನೇ ಶತ್ರು
ನನ್ನ 50 ವರ್ಷಗಳ ಗೆಳೆಯ ಅಂಬಿ. ಅವನು ಎಲ್ಲರಿಗೂ ಅಜಾತಶತ್ರುವಾಗಿದ್ದ; ಆದರೆ ಅವನಿಗೆ ಅವನೇ ಶತ್ರುವಾಗಿಬಿಟ್ಟ. ಎಲ್ಲ ವಿಷಯಗಳಲ್ಲೂ ಡೋಂಟ್‌ಕೇರ್‌ ಸ್ವಭಾವ. ಅವನ ಬಗ್ಗೆಯೇ ಅವನು ಕೇರ್‌ ತಗೊಳ್ಳಿಲ್ಲ...ರಾಜೇಂದ್ರ ಸಿಂಗ್ ಬಾಬು

3)ಮಂಡ್ಯ ಮಿಠಾಯಿ, ಮೊಟ್ಟೆ, ಕೈಮಾ ಸಾರು!
ನಗರದ ಕಾರೆಮನೆ ಗೇಟ್‌ನಲ್ಲಿರುವ ಮಿಠಾಯಿ ಅಂಗಡಿ ಬೆಳಕಿಗೆ ಬಂದಿದ್ದೇ ರೆಬಲ್‌ಸ್ಟಾರ್‌ ಅಂಬರೀಷ್‌ ಅವರಿಂದ. ಮಹದೇವಯ್ಯನ ಕೈಯಿಂದ ತಯಾರಾಗುತ್ತಿದ್ದ ತೆಂಗಿನಕಾಯಿ, ಬೆಲ್ಲದ ಮಿಠಾಯಿ ಎಂದರೆ ಅಂಬರೀಷ್‌ ಬಾಯಲ್ಲಿ ಸದಾ ನೀರು ಬರುತ್ತಿತ್ತು.

4)ಕಾರು ಕೊಡಿಸದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಅಂಬಿ
ಅಪ್ಪ ಕಾರು ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಅಂಬರೀಷ್‌ ಅವರು ಗಲಾಟೆ ಮಾಡಿ ಮನೆಬಿಟ್ಟು ಸುಮಾರು ಏಳು ತಿಂಗಳ ಕಾಲ ಮೈಸೂರಿನಲ್ಲೇ ಇದ್ದ ನಮ್ಮ ಮನೆಯಲ್ಲಿ ಬಂದು ನೆಲೆಸಿದ್ದರು. ಕೊನೆಗೂ ಅವರ ಅಪ್ಪ ಕಾರು ಖರೀದಿಸಲು ದುಡ್ಡು ಕೊಟ್ಟ ಬಳಿಕ ಮನೆಗೆ ವಾಪಸಾಗಿದ್ದರು. ಹಾಗೆ ಅವರು ಮೊದಲು ಖರೀದಿಸಿದ ಕಾರು ಹೆರಾಲ್ಡ್‌, ಅದರ ನಂಬರ್‌ 1011. ಆ ಬಳಿಕ ಆರು ತಿಂಗಳಿಗೊಂದರಂತೆ ಕಾರು ಬದಲಾಯಿಸಿದ್ದರು...ವಿಜಯಲಕ್ಷ್ಮಿ ಸಿಂಗ್

5)ಜಾತಕದ ಬೆನ್ನು ಹತ್ತಿದ್ದರೇ ಅಂಬಿ?
ಉಸಿರಾಟದ ತೊಂದರೆಗೆ ಚಿಕಿತ್ಸೆ ‍ಪಡೆಯಲು ಸಿಂಗಪುರಕ್ಕೆ ಹೋಗಿ ಬಂದ ಬಳಿಕ ರೆಬೆಲ್‌ಸ್ಟಾರ್‌ ಅಂಬರೀಷ್ ತಮ್ಮ ಆರೋಗ್ಯದ ಕುರಿತು ಸ್ವಲ್ಪ ಹೆಚ್ಚೇ ಚಿಂತಿತರಾಗಿದ್ದರು. ತೀರಾ ಇತ್ತೀಚೆಗೆ ತಮ್ಮ ಜಾತಕವನ್ನೂ ಹಲವು ಆಪ್ತರಿಗೆ ಕಳುಹಿಸಿಕೊಟ್ಟು, ಸಲಹೆ ಪಡೆದಿದ್ದರು ಎನ್ನುವುದು ಗೊತ್ತಾಗಿದೆ.

6)ಅಭಿಮಾನಿಗಳಿಗೆ ಅಂಬರೀಷ್ ಬರೆದಿದ್ದ ಪತ್ರ
ಎಲ್ರಿಗು ನಮಸ್ಕಾರ, ಇದೇನಪ್ಪಾ, ಅಂಬರೀಷ್‌ ಅವ್ರು ನಮಸ್ಕಾರ– ನಮಸ್ಕಾರ ಅಂತ ಹೇಳ್ತ ಇದ್ದಾರೆ. ಅವ್ರಿಗೆ ವಯಸ್ಸಾಯ್ತು ಅಂತಾ ಅಂದ್ಕೋಬೇಡಿ. ತುಂಬಾ ವರ್ಷಗಳ ನಂತರ ನಿಮ್ಮ ಜತೆ ಈ ಪತ್ರದ ಮುಖಾಂತರ ಮಾತಾಡ್ಬೇಕು ಅನಿಸ್ತು. ಅದಕ್ಕೆ ಒಂದು ಕಾರಣಾನೂ ಇದೆ. ಹುಟ್ಟಿದ್ದು ಮಂಡ್ಯ, ಕುಡಿದಿದ್ದು ಕಾವೇರಿ.

7)ಸಿಗರೇಟ್ ಬಿಟ್ರೆ ಎರಡು ದಿನ ಹೆಚ್ಚು ಬದುಕ್ತೀನಿ ಅಷ್ಟೆ..!
ಸಿಗರೇಟಿನ ಹೊಗೆ. ಸ್ವಲ್ಪ ಕೆಮ್ಮು. ಅದ್ಯಾಕೋ ಕಣ್ಣಿನಿಂದ ಆಗಾಗ್ಗೆ ನೀರು ತೊಟ್ಟಿಕ್ಕುತ್ತಿತ್ತು. ಕೈಗೆಟಕುವಂತೆಯೇ ಒಂದು ಟವೆಲ್ ಇಟ್ಟುಕೊಂಡಿದ್ದ ಅವರು ಪದೇ ಪದೇ ಕಣ್ಣೀರು ಒರೆಸುತ್ತಿದ್ದರು. "ಡ್ರಿಂಕ್ಸ್ ಬಿಟ್ಟಿದ್ದೀರಂತೆ, ಈ ಸಿಗರೇಟ್ ಏಕೆ ಬಿಟ್ಟಿಲ್ಲ..?' ಎಂದು ಮಾತಿನ ಮಧ್ಯೆ ಕೇಳಿದ್ದೆ. "ಬಿಡಬೇಕೂಂತ ಮಾಡಿದ್ದೆ. ಏ... ಏನ್... ಬಿಟ್ರೆ ಎರಡು ದಿನ ಹೆಚ್ಚು ಬದುಕ್ತೀನಿ. ಇಲ್ಲಾಂದ್ರೆ ಎರಡು ದಿನ ಮೊದಲು ಹೋಗ್ತೀನಿ ಅಷ್ಟೆ...'

8)ಅಂಬರೀಷ್‌: ನಟನಷ್ಟೇ ಅಲ್ಲ
ಅವರ ಬಳಿ ಇರುವ ಬೌನ್ಸಾದ ಚೆಕ್ಕುಗಳನ್ನು ಲೆಕ್ಕ ಹಾಕಿದರೆ ಏಳು ಕೋಟಿ ರೂಪಾಯಿ ಮೀರೀತು. ಅವರದ್ದು ಒರಟು ಮಾತು, ಹೃದಯ ಮೃದು. ಅಷ್ಟೊಂದು ಅಸ್ತವ್ಯಸ್ತವಾಗಿ ಬದುಕುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಇಂಥ ಒರಟೊರಟಾದ ಒಬ್ಬ ನಟನಿಗೆ ಇಷ್ಟೊಂದು ಅಭಿಮಾನಿಗಳು ಸಿಕ್ಕಿದ್ದಾದರೂ ಹೇಗೆ?- ಹೀಗೆ ಹಲವು ಸಿಕ್ಕುಗಳ ಸಮೇತ ಗುರುತು ಮೂಡಿಸಿದ ವ್ಯಕ್ತಿತ್ವ ಅಂಬರೀಷ್‌ ಅವರದು.

9) ರಾಜಕೀಯದಲ್ಲೂ ಅಂಬಿ ರೆಬೆಲ್‌
ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಂಬರೀಷ್‌, ರಾಜಕಾರಣಿಯಾದ ಮೇಲೂ ‘ರೆಬೆಲ್‌’ ಗುಣವನ್ನು ಬಿಟ್ಟಿರಲಿಲ್ಲ.ಸಿನಿಮಾದಿಂದ ರಾಜಕೀಯಕ್ಕೆ ಹೊರಳಿದ್ದ ಅಂಬರೀಷ್‌, ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಸಮ್ಮುಖದಲ್ಲಿ 1994ರಲ್ಲಿ ಕಾಂಗ್ರೆಸ್ ಸೇರಿದ್ದರು.

10)ಅಂಬಿಗೆ ನಿಜಕ್ಕೂ ವಯಸ್ಸಾಯ್ತಾ?
ಅಂಬರೀಶ್‌ ಜೊತೆಗಿನ ಸಂದರ್ಶನವೆಂದರೆ ಸಂತೆಯಲ್ಲಿ ಮಾತು ಹೆಕ್ಕಿದಂತೆ. ಅವರ ತುಂಡರಿಸಿದ ಮಾತುಗಳಲ್ಲಿ ಕನ್ನಡ ಸಿನಿಮಾ ಹಾಗೂ ಕರ್ನಾಟಕ ರಾಜಕಾರಣಕ್ಕೆ ಸಂಬಂಧಿಸಿದ ಅಮೂಲ್ಯ ವಿವರಗಳು ಸುಳಿದುಹೋಗುತ್ತವೆ. ‘ಸಿನಿಮಾ ಮತ್ತು ರಾಜಕಾರಣ ಸಾಕು’ ಎನ್ನುತ್ತಲೇ ತಮ್ಮ ನೆಚ್ಚಿನ ಎರಡೂ ಕ್ಷೇತ್ರಗಳ ಬಗ್ಗೆ ಮಾತನಾಡಿದ ಅವರ ಉತ್ಸಾಹವನ್ನು ನೋಡಿದರೆ, ಅವರು ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟು ಬಾಕಿಯುಳಿದಿದೆ ಎನ್ನಿಸುತ್ತದೆ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.