ADVERTISEMENT

ಸೂರ್ಯ, ಸಾಯಿ ಪಲ್ಲವಿ ಸೇರಿ ಹಲವರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 13:32 IST
Last Updated 14 ಫೆಬ್ರುವರಿ 2026, 13:32 IST
<div class="paragraphs"><p>ಸಿನಿ ತಾರೆಯರಿಗೆ&nbsp;ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ</p></div>

ಸಿನಿ ತಾರೆಯರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ

   

ತಮಿಳುನಾಡಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಚೆನ್ನೈನ ಕಲೈವಾನರ್ ಅರಂಗಂ ಸಭಾಂಗಣದಲ್ಲಿ ನಡೆಯಿತು. ಈ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಈ ಕುರಿತು ಪೋಸ್ಟ್ ಹಂಚಿಕೊಂಡ ನಟಿ ಐಶ್ವರ್ಯ ರಾಜೇಶ್, ‘ಕಾನಾ' ಚಿತ್ರದ ಕೌಸಲ್ಯ ಪಾತ್ರಕ್ಕೆ ಹಾಗೂ ‘ವಡ ಚೆನ್ನೈ‘  ಚಿತ್ರದ ‘ಪದ್ಮಾ‘ ಪಾತ್ರವನ್ನು ಗುರುತಿಸಿ ಪ್ರಶಸ್ತಿ  ನೀಡಿರುವುದಕ್ಕೆ ಹೆಮ್ಮೆ ಇದೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಉತ್ತಮ ಸಂಗೀತ ನಿರ್ದೇಶಕರ ವಿಭಾಗದಲ್ಲಿ ಎ.ಆರ್. ರೆಹಮಾನ್ ಅವರಿಗೆ ತಮಿಳುನಾಡಿನ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ಈ ಕುರಿತು ಸಾಮಾಜಿಕ ಮಾಧ್ಯಮ  ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕೀರ್ತಿ ಸುರೇಶ್ ಅವರ ‘ಪಾಂಭು ಸತ್ತೈ‘  ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. 

ನಟ ವಿಜಯ್ ಸೇತುಪತಿ, ಧನುಷ್, ಸೂರ್ಯ, ನಟಿ ಸಾಯಿ ಪಲ್ಲವಿ, ನಟಿ ಐಶ್ವರ್ಯ ರಾಜೇಶ್, ಕೀರ್ತಿ ಸುರೇಶ್ , ಸೇರಿ ಹಲವರಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಗೌರವಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.