ADVERTISEMENT

ರೇವಣ್ಣನ ನಿಂಬೆಹಣ್ಣಿಗೆ ಯಾವುದೇ ಬೆಲೆ ಇಲ್ಲ: ಎ.ಮಂಜು

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 6:54 IST
Last Updated 24 ಜುಲೈ 2019, 6:54 IST
ಎಚ್‌.ಡಿ.ರೇವಣ್ಣ ಹಾಗೂ ಎ.ಮಂಜು
ಎಚ್‌.ಡಿ.ರೇವಣ್ಣ ಹಾಗೂ ಎ.ಮಂಜು   

ಮೈಸೂರು: ಎಚ್‌.ಡಿ.ರೇವಣ್ಣ ಅವರ ನಿಂಬೆಹಣ್ಣಿಗೆ ಇಂದುಯಾವುದೇ ಬೆಲೆ ಇಲ್ಲ ಎಂದು ಬಿಜೆಪಿ ಮುಖಂಡ ಎ.ಮಂಜು ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು,‘ದೇವೇಗೌಡರ ಕುಟುಂಬಕ್ಕೆ 9ನೇ ನಂಬರ್‌ ಆಗಿಬರುವುದಿಲ್ಲ. 1989, 1999, 2009, 2019 ಚುನಾವಣೆಗಳಲ್ಲಿ ಸೋಲು ಎದುರಿಸಬೇಕಾಯಿತು’ ಎಂದು ಹೇಳಿದರು.

ಬರಿಗಾಲಲ್ಲಿ ದೇವಾಲಯಗಳಿಗೆ ಹೋಗಿ ಅಧಿಕಾರದ ಆಸೆಗಾಗಿ ಸರ್ಕಾರವನ್ನು ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದರೆ, ನಾವು ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಮಾಜಿ ಸಚಿವ ರೇವಣ್ಣ ವಿರುದ್ಧ ಕಿಡಿಕಾರಿದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.